ಮಂಗಳೂರು –
ಕಾರ್ಸ್ಟ್ರೀಟ್ನ ಡಾ ದಯಾನಂದ ಪೈ, ಡಾ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ ರಾಜಶೇಖರ ಹೆಬ್ಬಾರ್ ಅವರಿಗೆ ಭಡ್ತಿ ನೀಡಲಾಗಿದ್ದು ಈ ಒಂದು ಪ್ರಮೋಶನ್ ನಿಂದಾಗಿ ಸಧ್ಯ ಅವರು ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ವರ್ಗಾವಣೆಗೊಳಿಸಲಾಗಿದೆ.

1986ರಲ್ಲಿ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕರಾಗಿ ಸೇರ್ಪಡೆ ಯಾದ ಪ್ರೊ ಹೆಬ್ಬಾರ್ ಶಂಕರನಾರಾಯಣ ಕಾಲೇಜು, ಬಾರ್ಕೂರು ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾ ಗಿದ್ದರು.2014 ರಲ್ಲಿ ಬೆಳ್ಳಾರೆ ಡಾ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲರಾದರು. 2015 ರಿಂದ ಇಲ್ಲಿ ಪ್ರಾಂಶುಪಾಲರಾಗಿದ್ದರು





















