ಧಾರವಾಡದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ದ ಬಿಜೆಪಿ ಪಕ್ಷದಿಂದ ಪ್ರತಿಭಟನೆ – ಮನೆಯಲ್ಲಿಯೇ ಶಾಸಕರು ಹಕ್ಕು ಪತ್ರ ವಿತರಿಸಿದ್ದಾರೆಂದು ಸ್ಲಂ ಬೊರ್ಡ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ

Suddi Sante Desk
ಧಾರವಾಡದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ದ ಬಿಜೆಪಿ ಪಕ್ಷದಿಂದ ಪ್ರತಿಭಟನೆ – ಮನೆಯಲ್ಲಿಯೇ ಶಾಸಕರು ಹಕ್ಕು ಪತ್ರ ವಿತರಿಸಿದ್ದಾರೆಂದು ಸ್ಲಂ ಬೊರ್ಡ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ

ಧಾರವಾಡ

ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಮನೆಯ ಲ್ಲಿಯೇ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಿದ್ದಾರೆಂದು ಆರೋಪಿಸಿ ಬಿಜೆಪಿ ಪಕ್ಷದವರು ಧಾರವಾಡದಲ್ಲಿ ಪ್ರತಿಭಟನೆ ಮಾಡಿದರು.ಈ ಒಂದು ಘಟನೆ ಖಂಡಿಸಿ ಬಿಜೆಪಿ ಪಕ್ಷದ ಕಾರ್ಯಕ ರ್ತರು ಮುಖಂಡರು ಸ್ಲಂ ಬೋರ್ಡ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ನಗರದ ಟೋಲ್‌ನಾಕಾ ಬಳಿಯ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಮುಖಂಡರು ಅಧಿಕಾರಿಗಳ ವಿರುದ್ದ ಹಾಗೇ ಶಾಸಕರ ವಿರುದ್ದ ಘೋಷಣೆಗಳನ್ನು ಕೂಗಿದರು.ಮನೆಯಲ್ಲಿಯೇ ಹಕ್ಕುಪತ್ರ ವಿತರಿಸಿದ್ದಾರಂತೆ ಶಾಸಕ ಪ್ರಸಾದ ಅಬ್ಬಯ್ಯರವರು. ಹುಬ್ಬಳ್ಳಿಯ ತಮ್ಮ ನಿವಾಸಕ್ಕೆ ಸ್ಲಂ ಬೋರ್ಡ್ ಅಧಿಕಾರಿಗಳನ್ನು ಮನೆಗೆ ಕರೆಸಿ ಕೊಂಡಿದ್ದರಂತೆ ಶಾಸಕರು.ಗೋಪನಕೊಪ್ಪ ಬಡಾವಣೆಯಲ್ಲಿರುವ ಮನೆಗೆ ಕರೆಯಿಸಿಕೊಂಡು ವಿತರಣೆ ಮಾಡಿದ್ದಾರಂತೆ.ಫಲಾನುಭವಿಗಳಿಗೆ ಮನೆಯಲ್ಲಿಯೇ ಹಕ್ಕುಪತ್ರ ವಿತರಿಸಿದ್ದಾರಂತೆ ಶಾಸಕರು.

https://youtu.be/5NojeDBeUBY

ಶಾಸಕರ ಕ್ರಮಕ್ಕೆ ಬಿಜೆಪಿಯಿಂದ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಅಬ್ಬಯ್ಯ ಅಧಿಕಾರಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶವನ್ನು ವ್ಯಕ್ತಪ ಡಿಸಿದರು.ಹಕ್ಕುಪತ್ರಗಳನ್ನು ಈ ಕೂಡಲೇ ಹಿಂಪ ಡೆಯುವಂತೆ ಒತ್ತಾಯವನ್ನು ಮಾಡಲಾಯಿತು. ಕ್ಷಮಾಪಣಾ ಪತ್ರ ಬರೆದುಕೊಡುವಂತೆ ಆಗ್ರಹ ವನ್ನು ಪ್ರತಿಭಟನಾಕಾರರು ಮಾಡಿದರು.ಬಿಜೆಪಿ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಪೊಲೀಸರ ಹರಸಾಹಸವನ್ನು ಮಾಡಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.