ಶಿಕ್ಷಣ ಇಲಾಖೆ ಯನ್ನೊಳಗೊಂಡ ವಿವಿಧ ಇಲಾಖೆಗಳಲ್ಲಿ ಕೋವಿಡ್ ನಿಂದ ನಿಧನರಾದ ಸಿಬ್ಬಂದಿಗಳಿಗೆ ಕೂಡಲೇ ನಿವೃತ್ತಿ ಸೌಲಭ್ಯ ಒದಗಿಸಿ ಎಸ್ ವ್ಹಿ ಸಂಕನೂರ ಒತ್ತಾಯ…..

Suddi Sante Desk

ಗದಗ –

ಶಿಕ್ಷಣ ಇಲಾಖೆ ಯನ್ನೊಳಗೊಂಡು ವಿವಿಧ ಇಲಾಖೆ ಗಳಲ್ಲಿ ಕೋವಿಡ್ ನಿಂದ ನಿಧನರಾದ ಸಿಬ್ಬಂದಿಗಳಿಗೆ ವಿಧಾನ ಪರಿಷತ್ ಸದಸ್ಯ ಎಸ್ ವ್ಹಿ ಸಂಕನೂರ ಸ್ಪಂದಿಸಿದ್ದಾರೆ‌‌‌‌. ಸಧ್ಯ ಮೃತರಾದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕೂಡಲೇ ನಿವೃತ್ತಿ ಸೌಲಭ್ಯ ಒದಗಿಸಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ

ಕೋವಿಡ್ ಅವಧಿಯಲ್ಲಿ ರಾಜ್ಯದಲ್ಲಿ ಮೃತರಾದ ಶಿಕ್ಷಣ ಇಲಾಖೆಯನ್ನು ಒಳಗೊಂಡು ಅಧಿಕಾರಿ ಮತ್ತು ನೌಕರರಿಗೆ ಮಿಡಿದಿದ್ದಾರೆ.ಮೃತರಾದರವರಿಗೆ ಕೂಡಲೇ ನಿವೃತ್ತಿ ಸೇವಾ ಸೌಲಭ್ಯಗಳನ್ನು ಒದಗಿಸು ವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದು ಒತ್ತಾಯವನ್ನು ಮಾಡಿದ್ದಾರೆ

ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೌಕರರು ನಿಧನರಾಗಿದ್ದಾರೆ‌ ಹೀಗಾಗಿ ಸರ್ಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿ ಸಿ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹ ಮಾಡಿ ನೊಂದುಕೊಂಡಿರುವ ನೌಕರರ ಕುಟುಂಬದ ಪರವಾಗಿ ಧ್ವನಿ ಎತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.