ಬೀದಿ ಬದಿಯ ವ್ಯಾಪಾರಿಗಳಿಗೆ ನೆರಳಾದ ರಜತ್ ಉಳ್ಳಾಗಡ್ಡಿಮಠ – ಹತ್ತಾರು ಕೆಲಸ ಕಾರ್ಯ ಗಳ ನಡುವೆ ಮಾದರಿ ಕೆಲಸ ಮಾಡಿದ ಯುವ ನಾಯಕ

Suddi Sante Desk
ಬೀದಿ ಬದಿಯ ವ್ಯಾಪಾರಿಗಳಿಗೆ ನೆರಳಾದ ರಜತ್ ಉಳ್ಳಾಗಡ್ಡಿಮಠ – ಹತ್ತಾರು ಕೆಲಸ ಕಾರ್ಯ ಗಳ ನಡುವೆ ಮಾದರಿ ಕೆಲಸ ಮಾಡಿದ ಯುವ ನಾಯಕ

ಹುಬ್ಬಳ್ಳಿ

ಸದಾ ಒಂದಿಲ್ಲೊಂದು ವಿಶೇಷ ಕೆಲಸ ಕಾರ್ಯಗಳ ಮೂಲಕ ಜನ ಮನ ಗೆಲ್ಲುತ್ತಿರುವ ಹುಬ್ಬಳ್ಳಿಯ ಕಾಂಗ್ರೆಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಈಗ ಮತ್ತೊಂದು ನಾಲ್ಕಾರು ಜನರು ಮೆಚ್ಚುವ ಕೆಲಸವನ್ನು ಮಾಡಿದ್ದಾರೆ ಹೌದು ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕೆಲಸ ಮಾಡುತ್ತಿರುವ ಇವರಿ ಈಗ ಮತ್ತೊಂದು ಕೆಲಸದ ಮೂಲಕ ನೆನಪುಳಿಯುವಂತೆ ಮಾಡಿದ್ದಾರೆ

ಸಧ್ಯ ಒಂದು ಕಡೆ ನೆತ್ತಿ ಸುಡುವ ಬಿಸಿಲಿನ ತಾಪಮಾನದ ನಡುವೆ ರಜತ್ ಉಳ್ಳಾಗಡ್ಡಿಮಠ ಅವರು ಬೀದಿ ಬದಿಯ ವ್ಯಾಪಾರಿಗಳಿಗೆ ನೆರಳಾ ಗಿದ್ದಾರೆ.ನಗರದ ರಸ್ತೆಯ ಅಕ್ಕ ಪಕ್ಕದಲ್ಲಿ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ಬದುಕಿನ ಬಂಡಿ ನಡೆಸುತ್ತಿರುವ ಜನರಿಗೆ ನೆರಳಾಗಿ ಆಸರೆಯಾಗಿದ್ದಾರೆ.

ಬಿಸಿಲಿನ ತಾಪದಿಂದ ಸಮಸ್ಯೆಯನ್ನು ಅನುಭವಿ ಸಬಾರದು ಎಂದುಕೊಂಡು ಯುವ ನಾಯಕ ಅವರಿಗೆ ಛತ್ರಿಯನ್ನು ನೀಡಿ ನೆಮ್ಮದಿಯಿಂದ ವ್ಯಾಪಾರ ವಹಿವಾಟು ಮಾಡುವಂತೆ ನೆರಳಾಗಿ ಮಾದರಿ ಕೆಲಸದೊಂದಿಗೆ ಮೆಚ್ಚುಗೆ ಯ ಕಾರ್ಯ ಮಾಡಿದ್ದಾರೆ ರಜತ್ ಉಳ್ಳಾಗಡ್ಡಿಮಠ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.