ದೀಪಾವಳಿ ಹಬ್ಬದಲ್ಲಿ ಮಂಗಳಮುಖಿಯರಿಗೆ ಬೆಳಕಾದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ – ಹಬ್ಬದಲ್ಲಿ ಸೀರೆ,ಅರಿಶಿನ ಕುಂಕುಮ ನೀಡಿ ಮಂಗಳಮುಖಿಯರ ಆಶೀರ್ವಾದ ಪಡೆದುಕೊಂಡ ಯುವ ನಾಯಕ

Suddi Sante Desk
ದೀಪಾವಳಿ ಹಬ್ಬದಲ್ಲಿ ಮಂಗಳಮುಖಿಯರಿಗೆ ಬೆಳಕಾದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ – ಹಬ್ಬದಲ್ಲಿ ಸೀರೆ,ಅರಿಶಿನ ಕುಂಕುಮ ನೀಡಿ ಮಂಗಳಮುಖಿಯರ ಆಶೀರ್ವಾದ ಪಡೆದುಕೊಂಡ ಯುವ ನಾಯಕ

ಹುಬ್ಬಳ್ಳಿ

 

ಸದಾ ಒಂದಿಲ್ಲೊಂದು ಕೆಲಸ ಕಾರ್ಯಗಳ ಮೂಲಕ ವಿಶೇಷವಾಗಿ ಗಮನ ಸೆಳೆಯುತ್ತಿರುವ ಹುಬ್ಬಳ್ಳಿಯ ಕಾಂಗ್ರೇಸ್ ಪಕ್ಷದ ಯುವ ಮುಖಂಡ ಉತ್ಸಾಹಿ ನಾಯಕ ರಜತ್ ಉಳ್ಳಾಗಡ್ಡಿ ಮಠ ಈಗ ಮತ್ತೊಂದು ಕೆಲಸದ ಮೂಲಕ ಸಮಾಜವೇ ಮೆಚ್ಚುವಂತಹ ಕೆಲಸವನ್ನು ಮಾಡಿ ದ್ದಾರೆ.

ಹೌದು ಸಮಾಜದಲ್ಲಿ ಮಂಗಳಮುಖಿಯರು ಅಂದರೆ ವಿಶೇಷವಾಗಿ ಕಾಣುತ್ತಾರೆ ಹೀಗಿರುವಾಗ ಇವರನ್ನು ಗುರುತಿಸಿರುವ ಇವರು ಅವಳಿ ನಗರದ ಲ್ಲಿರುವ ಮಂಗಳ ಮುಖಿಯರನ್ನು ಗುರುತು ಮಾಡಿ ಅವರಿಗೆ ಆಮಂತ್ರಣವನ್ನು ನೀಡಿ ಬರ ಮಾಡಿಕೊಂಡು ಬೆಳಕಿನ ಹಬ್ಬ ದೀಪಾವಳಿಯಲ್ಲಿ ತಾವು ಅಷ್ಟೇ ಹಬ್ಬವನ್ನು ಮಾಡದೇ ಅವರಿಗೂ ಕೂಡಾ ಹೊಸ ಬಟ್ಟೆಗಳನ್ನು ನೀಡಿ ಅದರಲ್ಲೂ ಬಳೆ ಅರಿಶಿನ ಕುಂಕುಮ ಸೇರಿದಂತೆ ಕೆಲವೊಂ ದಿಷ್ಟು ವಸ್ತುಗಳನ್ನು ನೀಡಿ ಗೌರವಿಸಿ ಬೆಳಕಾಗಿ ದ್ದಾರೆ

ಇದರೊಂದಿಗೆ ಮಂಗಳಮುಖಿಯರು ಸಮಾಜದಿಂದ ಹೊರಗಿರುವವರು ಸಮಾಜ ಅವರನ್ನು ಕೆಟ್ಟದಾಗಿ ನೋಡುತ್ತದೆ ಕೆಲಸವಿಲ್ಲದೆ ಬೇಡಿ ತಿನ್ನುವ ಮಂಗಳಮುಖಿಯರಿಗೆ ಆಸರೆ ಯಾಗಿದ್ದಾರೆ.ದೀಪಾವಳಿಯ ಈ ಒಂದು ಶುಭ ಸಂದರ್ಭದಲ್ಲಿ ಮಂಗಳಮುಖಿಯರಿಗೆ ಸಿಹಿ ತಿಂಡಿ ಅರಶಿನ ಕುಂಕುಮ, ಸೀರೆ ನೀಡಿ ಶುಭ ಕೋರಿ ಅವರಿಂದ ಆಶೀರ್ವಾದ ತೆಗೆದುಕೊಂಡು ಸಮಾಜಕ್ಕೆ ಅದರಲ್ಲೂ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಯುವ ಉತ್ಸಾಹಿ ರಜತ್ ಉಳ್ಳಾಗಡ್ಡಿಮಠ ಅವರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.