ಸವಣೂರು ಕ್ಷೇತ್ರದಲ್ಲಿ ರಜತ್ ಉಳ್ಳಾಗಡ್ಡಿಮಠ ಮಿಂಚಿನ ಸಂಚಾರ – ಪಕ್ಷ ಸಂಘಟನೆಯೊಂದಿಗೆ ಜೋರಾಗಿದೆ ಲೋಕಸಭಾ ಚುನಾವಣೆಯ ಸಿದ್ದತೆ…..

Suddi Sante Desk
ಸವಣೂರು ಕ್ಷೇತ್ರದಲ್ಲಿ ರಜತ್ ಉಳ್ಳಾಗಡ್ಡಿಮಠ ಮಿಂಚಿನ ಸಂಚಾರ – ಪಕ್ಷ ಸಂಘಟನೆಯೊಂದಿಗೆ ಜೋರಾಗಿದೆ ಲೋಕಸಭಾ ಚುನಾವಣೆಯ ಸಿದ್ದತೆ…..

ಸವಣೂರು

ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರ ಲೋಕಸಭಾ ಕ್ಷೇತ್ರದ ತಯಾರಿ ಮತ್ತು ಪಕ್ಷದ ಸಂಘದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜೋರಾಗಿದೆ ಹೌದು ಈಗಾಗಲೇ ಕಾಲಿಗೆ ಚಕ್ರವನ್ನು ಕಟ್ಟಿ ಕೊಂಡು ತಿರುಗಾಡುತ್ತಿದ್ದಾರೆ.

ಹೀಗಾಗಿ ಇವರ ಮಿಂಚಿನ ಸಂಚಾರ ಲೋಕಸಭಾ ಕ್ಷೇತ್ರದಲ್ಲಿ ಮುಂದುವರೆದಿದ್ದು ಈ ಒಂದು ನಿಟ್ಟಿ ನಲ್ಲಿ ಬಿಡುವಿಲ್ಲದ ಇವರು ಸುತ್ತಾಡುತ್ತಿದ್ದು ಸಧ್ಯ ಹಾವೇರಿ ಜಿಲ್ಲೆಯ ಸವಣೂರು ಕ್ಷೇತ್ರದಲ್ಲಿ ತಿರು ಗಾಡುತ್ತಿದ್ದಾರೆ‌.

2024ರ ಲೋಕಸಭಾ ಚುನಾವಣೆ ಅಂಗವಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಸವಣೂರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಚೇರಿ ಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಸಭೆ ಮಾಡಿದರು ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರು ತಮ್ಮ ಅನಿಸಿಕೆ ಹಂಚಿ ಕೊಂಡರು.

ಇದರೊಂದಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಮಿಂಚಿನ ಸಂಚಾರ ದೊಂದಿಗೆ ಭರ್ಜರಿ ಯಾದ ಪಕ್ಷದ ಸಂಘಟನೆ ಹಾಗೂ ತಯಾರಿಯನ್ನು ರಜತ್ ಮಾಡುತ್ತಿದ್ದಾರೆ

ಬೂತ್ ಮಟ್ಟದ ಕಾರ್ಯಕರ್ತರು ಪಕ್ಷ ಸಂಘಟನೆ ಕುರಿತಂತೆ ಸಲಹೆ ಸೂಚನೆ ನೀಡಿ ದರು. ಮುಂಬ ರುವ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸವಣೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾದ ಎಂ.ಜೆ.ಮುಲ್ಲಾ, ಅದ್ದು ಪರಾಶ್, ಸಾಧಿಕ್ ಮನಿಯಾರ್, ರಾಮಣ್ಣ ಶಂಡಿಗೆ, ಅಜೀಂ ಮಿರ್ಜಾ ಸೇರಿದಂತೆ ಅನೇಕರು ಹಾಜರಿದ್ದರು.

ಸುದ್ದಿ ಸಂತೆ ನ್ಯೂಸ್ ಸವಣೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.