ACB ಬಲೆಗೆ ಬಿದ್ದ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ – 50 ಸಾವಿರ ತಗೆದುಕೊಳ್ಳುವಾಗ ರೇಂಡ್ ಆಂಡ್ ಟ್ರ್ಯಾಪ್…..

Suddi Sante Desk

ಹಾಸನ –

Acb ಬಲೆಗೆ ಜಿಲ್ಲಾಧಿಕಾರಿ ಸಿಬ್ಬಂದಿ ಯೊಬ್ಬರು ಬಿದ್ದ ಘಟನೆ ಹಾಸನ ದಲ್ಲಿ ನಡೆದಿದೆ.ಹೌದು ಹೊಸದಾಗಿ ಪೆಟ್ರೋಲ್ ಬಂಕ್ ತೆಗೆಯುವುದಕ್ಕೆ NOC ನೀಡಲು ಬೇಡಿಕೆ ಇಡಲಾಗಿದ್ದ 50 ಸಾವಿರ ಲಂಚವನ್ನು ಸ್ವೀಕರಿಸು ವಾಗ ಗ್ರಾಮಲೆಕ್ಕಿಗ ಸಂಜೀವ್ ಕುಮಾರ್ ಅವರೇ ಎಸಿಬಿ ಬಲೆಗೆ ಸಿಕ್ಕಿಬಿದ್ದವರಾಗಿದ್ದಾರೆ.

ಒಂದೂವರೆ ಲಕ್ಷ ರೂಪಾಯಿ ಬೇಡಿಕೆ ಇಟ್ಟು ಅದರಲ್ಲಿ ಮುಂಗಡವಾಗಿ ಐವತ್ತು ಸಾವಿರ ರೂಪಾಯಿ ತಗೆದು ಕೊಳ್ಳುವಾಗ ಟ್ರ್ಯಾಪ್ ಆಗಿದ್ದಾರೆ.ನಗರದ ಖಾಸಗಿ ಹೋಟೆಲೊಂದರಲ್ಲಿ ಈ ಒಂದು ಘಟನೆ ನಡೆದಿದೆ.

ಅರಕಲಗೂಡು ತಾಲೂಕಿನಲ್ಲಿ ಹೊಸದಾಗಿ ಪೆಟ್ರೋಲ್ ಬಂಕ್ ನಿರ್ಮಿಸುವ ನಿಟ್ಟಿನಲ್ಲಿ ನವ್ಯ ಎಂಬವರಿಗೆ ಭೂ ಪರಿವರ್ತನೆ ಮಾಡಿ NOC ಪಡೆಯಲು ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿದಾಗ ಗ್ರಾಮಲೆಕ್ಕಿಗ ಸಂಜೀವ್ ಎಂಬುವರಿಂದ ಒಟ್ಟು ಒಂದುವರೆ ಲಕ್ಷದ ಬೇಡಿಕೆ ಇಟ್ಟಿದ್ದರು.ಈ ಸಂಬಂದ ನವ್ಯ ಅವರು ಎಸಿಬಿ ಇಲಾಖೆಗೆ ದೂರು ನೀಡಿದ್ದು,ಎಸಿಬಿಯ ಡಿವೈಎಸ್ಪಿ ಸತೀಶ್ ನೇತೃತ್ವದ ಇನ್ಸ್ ಪೆಕ್ಟರ್ ವೀಣಾ, ಶಿಲ್ಪಾ ಅವರ ತಂಡ ಇಂದು ಮೊದಲ ನವ್ಯ ಅವರು ಮೊದಲ ಕಂತಿನ ಹಣ 50 ಸಾವಿರ ರೂ ಗಳನ್ನು ಖಾಸಗಿ ಹೋಟೆಲ್ ವೊಂದರಲ್ಲಿ ಗ್ರಾಮ ಲೆಕ್ಕಿಗ ಸಂಜೀವ್ ಗೆ ಕೊಡುವ ವೇಳೆ ಸಾಕ್ಷಿ ಸಮೇತವಾಗಿ ವಶಪಡಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.