ನಿವೃತ್ತ ಪೊಲೀಸ್ ಅಧಿಕಾರಿ ಕೋವಿಡ್ ಗೆ ಬಲಿ – ಅಪಾರ ಜನಮನ್ನಣೆ ಪಡೆದಿದ್ದ ರಂಗಸ್ವಾಮಿ

Suddi Sante Desk

ಮಂಡ್ಯ –

ಮಹಾಮಾರಿ ಕೊರೊನಾ ಗೆ ನಿವೃತ್ತ ASI ಒಬ್ಬರು ಸಾವಿಗೀಡಾದ ಘಟನೆ ಮಂಡ್ಯ ದಲ್ಲಿ ನಡೆದಿದೆ. ಕೆ.ಆರ್. ಪೇಟೆ ಪಟ್ಟಣದ ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಂಗಸ್ವಾಮಿ ಕೋವಿ ಡ್ ಸೋಂಕಿನಿಂದ ಬಳಲುತ್ತಿದ್ದರು ಆಸ್ಪತ್ರೆಗೆ ದಾಖ ಲಿಸ ಲಾಗಿದ್ದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ

ಪಟ್ಟಣದ ಜಯನಗರ ಬಡಾವಣೆಯ ನಿವಾಸಿಯಾ ಗಿರುವ ರಂಗಸ್ವಾಮಿ (70) ಕೋವಿಡ್‌ಗೆ ಬಲಿಯಾಗಿ ದ್ದಾರೆ. ನಿವೃತ್ತಿಯ ನಂತರವೂ ಪೊಲೀಸ್ ಠಾಣೆಯ ಲ್ಲಿ ಕೆಲಸ ಮಾಡಿ ರಾಜೀ ಪಂಚಾಯಿತಿ ಮೂಲಕ ಹಲವು ಕೌಟುಂಬಿಕ ಪ್ರಕರಣಗಳನ್ನು ಬಗೆಹರಿಸಿಕೊ ಡುತ್ತಿದ್ದರು.

ನಿವೃತ್ತಿಯ ನಂತರ 10 ವರ್ಷಗಳ ಕಾಲ ಉಚಿತ ಸೇವೆ ನೀಡುವ ಮೂಲಕ ಪೊಲೀಸ್ ಅಧಿಕಾರಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿನಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.