ಫೆ.1ರಿಂದ ರಾಜ್ಯದಲ್ಲಿ ಇ-ಆಫೀಸ್’ ಬಳಕೆ ಕಡ್ಡಾಯ – ಕಡ್ಡಾಯ ಆದೇಶ ಪಾಲಿಸದಿದ್ರೇ ನೋಟಿಸ್ ಕಂದಾಯ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ…..

Suddi Sante Desk
ಫೆ.1ರಿಂದ ರಾಜ್ಯದಲ್ಲಿ ಇ-ಆಫೀಸ್’ ಬಳಕೆ ಕಡ್ಡಾಯ – ಕಡ್ಡಾಯ ಆದೇಶ ಪಾಲಿಸದಿದ್ರೇ ನೋಟಿಸ್  ಕಂದಾಯ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ…..

ಬೆಂಗಳೂರು

ಫೆ.1ರಿಂದ ರಾಜ್ಯದಲ್ಲಿ ಇ-ಆಫೀಸ್’ ಬಳಕೆ ಕಡ್ಡಾಯ ಪಾಲಿಸದಿದ್ರೇ ನೋಟಿಸ್ – ಕಂದಾಯ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ ಹೌದು
ಬೆಂಗಳೂರು: ಈಗಾಗಲೇ ರಾಜ್ಯದ ಹಲವು ಇಲಾಖೆಗಳಲ್ಲಿ ಇ-ಆಫೀಸ್ ಜಾರಿಗೊಳಿಸಲಾಗಿದೆ. ಹೀಗಿದ್ರೂ ಕಂದಾಯ ಇಲಾಖೆಯಲ್ಲಿ ಕೆಲವರು ಭೌತಿಕ ಕಡತಗಳನ್ನು ನಿರ್ವಹಣೆ ಮಾಡ್ತಿದ್ದಾರೆ ಎಂಬ ದೂರು ಬಂಧಿತ್ತು.

ಈ ಹಿನ್ನಲೆಯಲ್ಲಿ ಫೆಬ್ರವರಿ.1ರಿಂದ ಇ-ಆಫೀಸ್ ಕಡ್ಡಾಯಗೊಳಿಸಲಾಗಿದೆ.ಒಂದು ವೇಳೆ ಇದನ್ನು ಪಾಲಿಸದೇ ಇದ್ರೆ ನೋಟಿಸ್ ನೀಡೋದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, ಇ- ಆಫೀಸ್‌ ತಂತ್ರಾಂಶ ಬಳಕೆ ಮಾಡದೇ,

ಭೌತಿಕ ಕಡತಗಳನ್ನು ತೆರೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.ಇ- ಆಫೀಸ್‌ ತಂತ್ರಾಂಶ ಕುರಿತು ನಿಯಮಿತವಾಗಿ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿ ಸಲಾಗಿದೆ. ಭೌತಿಕ ಕಡತ ನಿರ್ವಹಣೆ ಮಾಡಿದ ವರಿಗೆ ನೋಟಿಸ್‌ ಜಾರಿಗೊಳಿಸಲಾಗುವುದು ಎಂದಿದ್ದಾರೆ.

ಕಂದಾಯ ಇಲಾಖೆಯ ಎಲ್ಲ ಹಂತದ ಕಚೇರಿಗ ಳಲ್ಲಿ ಫೆಬ್ರವರಿ.1ರಿಂದ ಇ-ಆಫೀಸ್ ತಂತ್ರಾಂಶದ ಮೂಲಕವೇ ಕಡತ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು. ಭೌತಿಕ ಕಡತಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ಸ್ಥಗಿತ ಗೊಳಿಸಲಾಗುವುದು.

ಟಪಾಲು ಸ್ವೀಕಾರ ಮತ್ತು ಮುಂದಿನ ಪ್ರಕ್ರಿಯೆ ಯೂ ಇ-ಆಫೀಸ್ ಮೂಲಕವೇ ನಡೆಯಲಿದೆ ಎಂದಿದ್ದು ಈಗಾಗಲೇ ಈ ಒಂದು ಪ್ರಕ್ರಿಯೆ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಆರಂಭಗೊಂ ಡಿದ್ದು ಫೆಬ್ರವರಿ 1 ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.