ಮಕ್ಕಳಿಗಾಗಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮಾಡಿದ ಕೆಲಸ ನೋಡಿ – ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸಲು ಪರಮೇಶ್ವರ ಗದ್ಯಾಳ ಯುವ ಶಿಕ್ಷಕರ ಕೆಲಸ ವೈರಲ್…..

Suddi Sante Desk

ವಿಜಯಪುರ –

ಸರ್ಕಾರಿ ಶಾಲೆಗೆ ಮಕ್ಕಳು ಆಕರ್ಷಿತರಾಗಿ ಅವರ ಕಲಿಕೆಗೆ ಸಹಾಯಕವಾಗಲುವ ಉದ್ದೇಶದಿಂದ ಶಿಕ್ಷಕರೊಬ್ಬರು ಶಾಲೆ ಯನ್ನು ಅಂದ ಚಂದವಾಗಿ ಕಾಣುವಂತೆ ಮಾಡಿ ಆಕರ್ಷಣೆ ಆಗಿ ಮಾಡಿದ ಘಟನೆ ವಿಜಯಪುರ ದಲ್ಲಿ ಕಂಡು ಬಂದಿದೆ

ಹೌದು ವಿಜಯಪುರದ ತಿಕೋಟಾ ತಾಲೂಕಿನ ಘೊಣಸಗಿ ಎಲ್ ಟಿ ನಂಬರ್ 1 ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಇಂತಹ ಒಂದು ಚಿತ್ರಣ ನೋಡಲು ಸಿಗುತ್ತದೆ. ಪರಮೇಶ್ವರ ಗದ್ಯಾಳ ಎಂಬ ಶಿಕ್ಷಕರೇ ಶಾಲೆಯನ್ನು ಅಂದ ಚಂದವನ್ನಾಗಿ ಮಾಡಿ ಈ ಸೇವೆ ಸಲ್ಲಿಸಿದ್ದಾರೆ.

ತಾನು ಕಾರ್ಯನಿರ್ವಹಿಸುತ್ತಿರುವ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟ ಯುವ ಶಿಕ್ಷಕ ಸ್ವಂತ ಹಣ ಖರ್ಚು ಮಾಡಿ ಅಂದಚೆಂದಗೊಳಿಸಿ ಇದರೊಂದಿಗೆ ಮಕ್ಕಳ ಮನಸ್ಸು ಮುದಗೊಳಿಸಿದ್ದಾರೆ.ಜೊತೆಗೆ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ.ಒಂದು ಲಕ್ಷ ರೂಪಾಯಿ ಸ್ವಂತ ಹಣ ಖರ್ಚು ಮಾಡಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅವರು ನೆರವೇರಿಸಿ ದ್ದಾರೆ.

ಪರಮೇಶ್ವರ ಗದ್ಯಾಳ ಎಂಬ ಯುವ ಶಿಕ್ಷಕರ ಕಾರ್ಯ ಈಗ ಗ್ರಾಮಸ್ಥರ ಮತ್ತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಎಲ್ಲೆಡೆ ವೈರಲ್ ಅಗಿದೆ. ಒಟ್ಟಾರೆ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗೆ ಕಡಿಮೆ ಇಲ್ಲ ಎಂಬಂತೆ ಮಾಡಿರುವ ಇವರ ಈ ಒಂದು ಕಾರ್ಯ ನಿಜವಾಗಿಯೂ ಮೆಚ್ಚುವಂತಹದ್ದು ಅಲ್ಲದೆ ಇತರರಿಗೆ ಈ ಮೂಲಕ ಇವರು ಮಾದರಿಯಾಗಿ ಪ್ರೇರಣೆಯಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.