This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಈ BEO ಅವರು ಮಾಡಿದ ಕೆಲಸ ನೋಡಿ – ಬಸವರಾಜ ತಳವಾರ ಅವರು ಸರ್ಕಾರಿ ಶಾಲೆಯಲ್ಲಿ ಮಾಡಿದ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರ…..

WhatsApp Group Join Now
Telegram Group Join Now

ಆಲಮಟ್ಟಿ –

ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ಬೇನಾಳ ಆರ್‌.ಎಸ್‌.ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯಗಳನ್ನು ಸ್ವಚ್ಛ ಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಚ್ಛತಾ ಅಭಿಯಾನಕ್ಕಾಗಿ ನಿತ್ಯ ಜಾಗೃತಿ ಮೂಡಿಸುವದು ಹಾಗೂ ಅವುಗಳ ಸ್ವಚ್ಛತೆಗಾಗಿ ಹಣ ಖರ್ಚು ಮಾಡುತ್ತಿದ್ದರೂ ಸಂಪೂರ್ಣ ಯಶಸ್ಸು ಕಾಣದಿರುವುದರಿಂದ ಅದರ ಯಶಸ್ವಿಗಾಗಿ ತಾಲೂಕಿನ ಪ್ರತಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೌಚಾಲಯ ಸ್ವತ್ಛಗೊಳಿಸುವುದರ ಜತೆಗೆ ಶಾಲಾ ಆವರಣ ಸ್ವತ್ಛಗೊಳಿಸುವ ಕಾರ್ಯಕ್ಕೆ ಈ ಮೂಲಕ ಅವರು ಮುಂದಾಗಿದ್ದಾರೆ.

ಬೇನಾಳ ಆರ್‌ಎಸ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಪ್ರಾಥಮಿಕ ಶಾಲೆ, ಬೇನಾಳ ಎನ್‌ಎಚ್‌ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ಗಳ ಶೌಚಾಲಯಗಳನ್ನು ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿ ತಳವಾರ ಅವರೇ ಪೊರಕೆ ಹಿಡಿದು ಬಕೆಟ್‌ ಮೂಲಕ ನೀರು ಹಾಕಿ ಸ್ವಚ್ಛಗೊಳಿಸಿದರು.ಈ ಒಂದು ಸಮಯದಲ್ಲಿ ವಿ.ಪಿ. ಜುಳಜುಳಿ,ಆರ್‌.ಎ.ನದಾಫ್‌,ಸಲೀಂ ದಡೇದ ಬಿ.ಎಸ್‌ ಇಜೇರಿ,ಆರ್‌.ಎಸ್‌.ವಂದಗನೂರ,ಜಿ.ಡಿ. ಆಸಂಗಿ ಪಿಡಿಓ ಬಿಳೇಕುದರಿ, ಶಶಿ ಭಾವಿಕಟ್ಟಿ, ಸುರೇಶ ಹುರಕಡ್ಲಿ, ಎನ್‌.ಬಿ. ದಾಸರ, ಬಿ. ಹನುಮಂತಪ್ಪ, ಎಸ್‌.ಸಿ. ರಾಠೊಡ, ಆರ್‌.ಎಸ್‌. ಕಮತ, ಕೆ.ವಿ. ಕುಕನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು


Google News

 

 

WhatsApp Group Join Now
Telegram Group Join Now
Suddi Sante Desk