This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

KSRTC ಯ ಮೂರು ಬಸ್ ಜಪ್ತಿ ನಾಲ್ಕು ವರ್ಷಗಳ ಹಿಂದಿನ ಪ್ರಕರಣಕ್ಕೆ ನ್ಯಾಯಾಲಯದ ಆದೇಶದಂತೆ ಜಪ್ತಿ…..

WhatsApp Group Join Now
Telegram Group Join Now

ದಾವಣಗೆರೆ –

ನಾಲ್ಕು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಮೃತಪಟ್ಟ ವರಿಗೆ ಪರಿಹಾರ ನೀಡದ ಕಾರಣಕ್ಕಾಗಿ KSRTC ಯ ಮೂರು ಬಸ್ ಗಳನ್ನು ಜಪ್ತಿ ಮಾಡಿದ ಘಟನೆ ದಾವಣಗೆರೆ ಯ ಹರಿಹರ ದಲ್ಲಿ ನಡೆದಿದೆ. ಹೌದು ಬಸ್‌ಗಳನ್ನು ನ್ಯಾಯಾಲಯದ ಆದೇಶದಂತೆ ಹರಿಹರ ಬಸ್‌ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದಾರೆ.ಹರಿಹರ ತಾಲ್ಲೂಕಿನ ರಾಜನಹಳ್ಳಿ ಕ್ರಾಸ್‌ ಬಳಿ 2017ರಲ್ಲಿ ಹುಬ್ಬಳ್ಳಿ ಘಟಕದ ಕೆಎಸ್‌ಆರ್‌ಟಿಸಿ ಬಸ್‌ ಅಫಘಾತಕ್ಕೀಡಾಗಿತ್ತು.ಅದರಲ್ಲಿ ಹರಿಹರ ತಾಲ್ಲೂಕು ಹೊಸಳ್ಳಿಯ ಚಂದ್ರಪ್ಪ ಅವರ ಮಕ್ಕ ಳಾದ ಬಸವರಾಜ ಮತ್ತು ಮಂಜುನಾಥ ಮೃತಪಟ್ಟಿದ್ದರು. ಒಬ್ಬರು ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ ಕೆಲಸ ಮಾಡುತ್ತಿ ದ್ದರೆ ಇನ್ನೊಬ್ಬರು ಕೃಷಿಕರಾಗಿದ್ದರು.ಈ ಪ್ರಕರಣದಲ್ಲಿ ₹ 24 ಲಕ್ಷ ಪರಿಹಾರ ನೀಡುವಂತೆ ಹರಿಹರ ತಾಲ್ಲೂಕು ನ್ಯಾಯಾ ಲಯವು ತೀರ್ಪು ನೀಡಿತ್ತು ಆದರೆ ಕೆಎಸ್‌ಆರ್‌ಟಿಸಿಯು ಪರಿಹಾರ ನೀಡಿರಲಿಲ್ಲ.

ಈ ಇಬ್ಬರು ಮಕ್ಕಳನ್ನು ಕಳೆದುಕೊಂಡು ಜೀವನ ಸಾಗಾಟ ಕಷ್ಟವಾಗಿದೆ ಎಂದು ಚಂದ್ರಪ್ಪ(77) ನ್ಯಾಯಾಲಯಕ್ಕೆ ಮತ್ತೆ ಮನವಿ ಮಾಡಿದ್ದರು ಹುಬ್ಬಳ್ಳಿ ವಿಭಾಗದ ಮೂರು ಬಸ್‌ ಗಳನ್ನು ವಶಪಡಿಸಿಕೊಳ್ಳುವಂತೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.ಅದರಂತೆ ಹರಿಹರ ನ್ಯಾಯಾಲಯದ ಸಿಬ್ಬಂದಿ ಗಳಾದ ಶ್ರೀನಿವಾಸಮೂರ್ತಿ,ಮನೋಹರ, ಬಸಪ್ಪಾಜಿ, ಓಂಕಾರಪ್ಪ,ಮಹಾಂತೇಶ ಅವರು ಮೂರು ಬಸ್‌ಗಳನ್ನು ಜಪ್ತಿ ಮಾಡಿದರು.ಬಸ್‌ಗಳನ್ನು ನ್ಯಾಯಾಲ ಯಕ್ಕೆ ತರಲಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk