ಅಕ್ರಮವಾಗಿ ಸಾಗಿಸುತ್ತಿದ್ದ ಶಾಲಾ ಮಕ್ಕಳ ಕ್ಷೀರಭಾಗ್ಯ ಹಾಲಿನ ಪೌಡರ್ ವಶ – ಲಕ್ಷಾಂತರ ರೂಪಾಯಿ ಮೌಲ್ಯದ ಪೌಡರ್ ವಶ ಗುತ್ತಿಗೆದಾರನ ಬಂಧನ…..

Suddi Sante Desk
ಅಕ್ರಮವಾಗಿ ಸಾಗಿಸುತ್ತಿದ್ದ ಶಾಲಾ ಮಕ್ಕಳ ಕ್ಷೀರಭಾಗ್ಯ ಹಾಲಿನ ಪೌಡರ್ ವಶ – ಲಕ್ಷಾಂತರ ರೂಪಾಯಿ ಮೌಲ್ಯದ ಪೌಡರ್ ವಶ ಗುತ್ತಿಗೆದಾರನ ಬಂಧನ…..

ಬಾಗಲಕೋಟೆ

ಶಾಲಾ ಮಕ್ಕಳಿಗೆ ವಿತರಣೆ ಮಾಡಬೇಕಾಗಿದ್ದ ಹಾಲಿನ ಪೌಡರ್ ನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲ ವನ್ನು ಬಾಗಲಕೋಟೆಯಲ್ಲಿ ಪತ್ತೆ ಮಾಡಲಾಗಿದೆ ಹೌದು ತಾಲ್ಲೂಕಿನ ಸೂಳಿಕೇರಿಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಕೊಡುವ ₹17.90 ಲಕ್ಷ ಮೌಲ್ಯದ 44.7 ಕ್ವಿಂಟಲ್‌ ಹಾಲಿನ ಪುಡಿಯನ್ನು ಮಧ್ಯರಾತ್ರಿ ಬಾಗಲಕೋಟೆ ಸಿಇಎನ್‌ ಪೊಲೀಸ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಾಲಿನ ಪೌಡರ್‌ನೊಂದಿಗೆ 3.25 ಕ್ವಿಂಟಲ್‌ ರಾಗಿ ಹಿಟ್ಟು, 50 ಲೀಟರ್ ಅಡುಗೆ ಎಣ್ಣೆ ಸೇರಿ ಒಟ್ಟು ₹18.14 ಲಕ್ಷ ಮೌಲ್ಯದ ವಸ್ತುಗಳು, ಸಾಗಾಟಕ್ಕೆ ಬಳಸುತ್ತಿದ್ದ ವಾಹನ ವನ್ನು ವಶಪಡಿಸಿಕೊಂಡಿದ್ದಾರೆ, ಆರೋಪಿ ಸಿದ್ದಪ್ಪ ಕಿತ್ತಲಿ ಬಂಧಿಸಲಾಗಿದೆ.

ಜಿಲ್ಲೆಯ ಹುನಗುಂದ, ಬಾದಾಮಿ ತಾಲ್ಲೂಕಿನ ಶಾಲೆ ಗಳಿಗೆ ಹಾಲಿನ ಪೌಡರ್ ನೀಡುವ ಗುತ್ತಿಗೆಯನ್ನು ಮಹಾಲಿಂಗಪುರದ ಶ್ರೀಶೈಲ ಅಂಗಡಿ ಎಂಬುವವರು ಪಡೆದುಕೊಂಡಿದ್ದರು. ಅವರು ಸಿದ್ದಪ್ಪ ಕಿತ್ತಲಿ ಅವರಿಗೆ ಸಬ್‌ ಲೀಸ್‌ ನೀಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ಶಾಲಾ ಅಧಿಕಾರಿಗಳೊಂದಿಗೆ ಶಾಮಿಲಾಗಿ ಶಾಲೆಗಳಿಗೆ ಹಾಲಿನ ಪೌಡರ್‌ ಅನ್ನು ಸಂಪೂರ್ಣವಾಗಿ ಸರಬರಾಜು ಮಾಡದೇ ಉಳಿಸಿಕೊಳ್ಳುತ್ತಿದ್ದರು. ಅದನ್ನು ಅಕ್ರಮ ವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಕಳುಹಿಸುತ್ತಿದ್ದರು ಎಂದು ದೂರು ದಾಖಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬಾಗಲಕೋಟ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.