ಲೋಕಾಯುಕ್ತ ಬಲೆಗೆ ಬಿದ್ದ ಹಿರಿಯ ಭೂಮಾಪಕ 10 ಸಾವಿರ ರೂಪಾಯಿ ಗಾಗಿ ಟ್ರ್ಯಾಪ್ ಆಗಿ ಜೈಲು ಸೇರಿದ M M ರಾಮದುರ್ಗ…..

Suddi Sante Desk
ಲೋಕಾಯುಕ್ತ ಬಲೆಗೆ ಬಿದ್ದ ಹಿರಿಯ ಭೂಮಾಪಕ 10 ಸಾವಿರ ರೂಪಾಯಿ ಗಾಗಿ ಟ್ರ್ಯಾಪ್ ಆಗಿ ಜೈಲು ಸೇರಿದ M M ರಾಮದುರ್ಗ…..

ನವಲಗುಂದ

ನವಲಗುಂದ ದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಹಿರಿಯ ಭೂಮಾಪಕ ಹೌದು ಜಮೀನಿನ 11ಇ ಸ್ಕೆಚ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ನವಲಗುಂದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಹಿರಿಯ ಭೂಮಾಪಕ ಎಂ.ಎಂ.ರಾಮದುರ್ಗ ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಧಾರವಾಡದ ವಿಶ್ವನಾಥ ಉಣ್ಣೆಮಠ ಎಂಬುವ ವರು ತಮ್ಮ ಜಮೀನಿನ 11ಇ ಸ್ಕೆಚ್ ಮಾಡಿಕೊ ಡಲು ನವಲಗುಂದದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.ಆದರೆ ಈ ಕೆಲಸ ಮಾಡಿಕೊಡಲು ಹಿರಿಯ ಭೂ ಮಾಪಕ ಎಂ.ಎಂ.ರಾಮದುರ್ಗ ಅವರು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ವಿಶ್ವನಾಥ ಅವರು ನಿನ್ನೆಯಷ್ಟೇ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿ ದ್ದರು.ಇಂದು ಭೂಮಾಪಕ ಎಂ.ಎಂ.ರಾಮದುರ್ಗ 10 ಸಾವಿರ ಲಂಚ ಪಡೆಯುವಾಗಲೇ ಲೋಕಾ ಯುಕ್ತ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾರೆ

ಸುದ್ದಿ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.