ಮುಖ್ಯ ಶಿಕ್ಷಕ ಸೇರಿ ಏಳು ಜನ ಶಿಕ್ಷಕರು ಅಮಾನತು – DDPI ಅಮಾನತು ಮಾಡಿ ಆದೇಶ…..

Suddi Sante Desk

ಗದಗ –

ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕೊಠಡಿ ಪ್ರವೇಶಿಸಲು ಅವಕಾಶ ನೀಡಿದ್ದ ಶಿಕ್ಷಕರು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಅಮಾನತು ಮಾಡಿ ಆದೇಶಿಸ ಲಾಗಿದೆ.ನ್ಯಾಯಾಲಯದ ತೀರ್ಪು ಉಲ್ಲಂಘಿಸಿ ವಿದ್ಯಾರ್ಥಿ ಗಳು ಹಿಜಾಬ್‌ ಧರಿಸಿ ಕೊಠಡಿ ಒಳಗೆ ಬರಲು ಅವಕಾಶ ನೀಡಿದ ಗದುಗಿನ ಸಿ.ಎಸ್‌.ಪಾಟೀಲ ಬಾಲಕರ ಪ್ರೌಢಶಾಲೆ ಹಾಗೂ ಸಿ.ಎಸ್‌.ಪಾಟೀಲ ಬಾಲಕಿಯರ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರಾದ ಎಸ್‌.ಯು.ಹೊಕ್ಕಳದ,ಎಸ್‌.ಎಂ.ಪತ್ತಾರ ಎಸ್‌.ಜಿ. ಗೋಡಕೆ,ಎಸ್‌.ಎಸ್‌.ಗುಜಮಾಗಡಿ,ವಿ.ಎನ್‌.ಕಿವುಡರ ಅವರನ್ನು ಅಮಾನತು ಮಾಡಲಾಗಿದೆ ಎಂದು ಗದಗ ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ತಿಳಿಸಿದ್ದಾರೆ.

ಈ ಎರಡೂ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಬಿ.ಭಜಂತ್ರಿ ಮತ್ತು ಬಿ.ಎಸ್‌. ಹೊನಗುಡಿ ಅವರನ್ನು ಸಹ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.