7ನೇ ವೇತನ ಆಯೋಗದ ಸಮಿತಿ ರಚನೆಗೆ ತುರ್ತು ಸಭೆ ಕರೆದ CM – ತಡರಾತ್ರಿ ಇಲ್ಲವೇ ಬೆಳಿಗ್ಗೆ ಹೊರಬೀಳಲಿದೆ ಸಮಿತಿ ಮಾಹಿತಿ ನೀಡಿದ್ರು ಷಡಾಕ್ಷರಿ ಅವರು

Suddi Sante Desk
7ನೇ ವೇತನ ಆಯೋಗದ ಸಮಿತಿ ರಚನೆಗೆ ತುರ್ತು ಸಭೆ ಕರೆದ CM  – ತಡರಾತ್ರಿ ಇಲ್ಲವೇ ಬೆಳಿಗ್ಗೆ ಹೊರಬೀಳಲಿದೆ ಸಮಿತಿ ಮಾಹಿತಿ ನೀಡಿದ್ರು ಷಡಾಕ್ಷರಿ ಅವರು

ಬೆಂಗಳೂರು

 

ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ನೀಡುವ ಕುರಿತಂತೆ ಈಗಷ್ಟೇ ರಾಜ್ಯದ ಸರ್ಕಾರಿ ನೌಕರರಿಗೆ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿಯನ್ನು ನೀಡಿದ್ದು ಇದರ ಬೆನ್ನಲ್ಲೇ ಈ ಒಂದು ಸಮಿತಿ ರಚನೆ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯನ್ನು ಕರೆದಿದ್ದಾರೆ.

ಹೌದು ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಪ್ರವಾಸದಲ್ಲಿರುವ ಹಿನ್ನಲೆ ಯಲ್ಲಿ ಮುಖ್ಯಮಂತ್ರಿ ಅವರು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೆಲವೊಂದಿಷ್ಟು ಸಚಿವರ ನೇತ್ರತ್ವದಲ್ಲಿ ಸಭೆ ಯನ್ನು ಕರೆದಿದ್ದು ಈ ಒಂದು ಸಭೆಯಲ್ಲಿ ಪ್ರಮುಖವಾಗಿ ಸಮಿತಿಗೆ ಯಾರನ್ನು ಅಧ್ಯಕ್ಷರ ನ್ನಾಗಿ ಮಾಡಬೇಕು ಹಾಗೇ ಯಾರು ಯಾರು ಸಮಿತಿಯಲ್ಲಿ ಇರಬೇಕು ಜೊತೆಗೆ ಎಷ್ಟು ದಿನ ಗಳಲ್ಲಿ ವರದಿ ನೀಡಲು ಗಡುವು ಹೀಗೆ ಹಲವಾರು ವಿಚಾರಗಳ ಕುರಿತಂತೆ ಸಭೆಯಲ್ಲಿ ಚರ್ಚೆಯನ್ನು ಮಾಡಲಾಗುತ್ತಿದ್ದು

ಮುಖ್ಯಮಂತ್ರಿ ನೇತ್ರತ್ವದಲ್ಲಿ ಈ ಒಂದು ಸಭೆ ನಡೆಯುತ್ತಿದ್ದು ಗೃಹ ಕಚೇರಿಯಲ್ಲಿ ನಡೆದ ಸಭೆ ಯಲ್ಲಿ ಸುಧೀರ್ಘವಾಗಿ ಚರ್ಚೆಯನ್ನು ಮಾಡು ತ್ತಿದ್ದು ಚರ್ಚೆಯ ನಂತರ ಸ್ಪಷ್ಟವಾದ ಸಮಿತಿ ರಚನೆ ಕುರಿತಂತೆ ಮಾಹಿತಿ ಹೊರಬೀಳಲಿದ್ದು ನಂತರ ಈ ವೇತನ ಆಯೋಗ ಕುರಿತಂತೆ ಕಾರ್ಯ ಚಟುವಟಿಕೆಗಳು ಅಧಿಕೃತವಾಗಿ ಹೊರಬೀಳ ಲಿದ್ದು ನಾಳೆ ಸಂಜೆ ಸರ್ಕಾರದಿಂದಲೂ ಕೂಡಾ ಅಧಿಕೃತವಾಗಿ ಆದೇಶವೂ ಕೂಡಾ ಆಗಲಿದೆ.

 

 

ಒಟ್ಟಾರೆ ಈ ಒಂದು ಸಮಿತಿಗೆ ಹಿರಿಯ ಅಧಿಕಾ ರಿಗಳ ನೇತ್ರತ್ವದಲ್ಲಿ ರಚನೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಯಾರು ಯಾರು ಇರಲಿದ್ದಾರೆ ಎಂಬೊದನ್ನು ಕಾದು ನೋಡ ಬೇಕಿದೆ.

ಚಕ್ರವರ್ತಿ ಜೊತೆ ಮಂಜುನಾಥ ಬಡಿಗೇರ ಸುದ್ದಿ ಸಂತೆ ನ್ಯೂಸ್ ಬೆಂಗಳೂರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.