ಒಂದೆ ಒಂದು ರೂಪಾಯಿ ದೇಣಿಗೆ ಸಂಗ್ರಹಿಸಿದ್ದೇವೆ ಎಂಬುದು ಸಾಬೀತಾದರೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರುವುದಿಲ್ಲವೆಂದ ಷಡಾಕ್ಷರಿಯವರು – ನೌಕರರಿಂದ ದೇಣಿಗೆ ಪಡೆದು ಹೋರಾಟ ಮಾಡುವ ನಾಯಕರಿಗೆ ಟಾಂಗ್ ನೀಡಿದ ಷಡಾಕ್ಷರಿಯವರು…..

Suddi Sante Desk
ಒಂದೆ ಒಂದು ರೂಪಾಯಿ ದೇಣಿಗೆ ಸಂಗ್ರಹಿಸಿದ್ದೇವೆ ಎಂಬುದು ಸಾಬೀತಾದರೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರುವುದಿಲ್ಲವೆಂದ ಷಡಾಕ್ಷರಿಯವರು – ನೌಕರರಿಂದ ದೇಣಿಗೆ ಪಡೆದು ಹೋರಾಟ ಮಾಡುವ ನಾಯಕರಿಗೆ ಟಾಂಗ್ ನೀಡಿದ ಷಡಾಕ್ಷರಿಯವರು…..

ಬೆಂಗಳೂರು

ರಾಜ್ಯದ ಸಮಸ್ತ ಸರ್ಕಾರಿ ನೌಕರರ ಸಮಸ್ಯೆ ಗಳ ಕುರಿತು ಮತ್ತು ನೌಕರರ ಸಮಸ್ಯೆಗಳ ಪರಿಹಾದತ್ತ ಆದ್ಯತೆ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು ಹೇಳಿದರು. ಬೆಂಗಳೂರಿನಲ್ಲಿ ಮಾತನಾ ಡಿದ ಅವರು ರಾಜ್ಯದಲ್ಲಿ ಕೆಲವರು ಹೊಸ ಪಿಂಚಣಿ ಯೋಜನೆಯನ್ನು ಜಾರಿಯನ್ನೇ ಜೀವಂತವಾಗಿಟ್ಟಿದ್ದಾರೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಮಾಡಲು ಆದ್ಯತೆ ನೀಡುತ್ತದೆ. ಕೆಲವರು ಹೋರಾಟದ ಹೆಸರಿನಲ್ಲಿ ದೇಣಿಗೆ ಎತ್ತ ಬೇಕೆಂಬ ಮನಸ್ಥಿತಿ ಹೊಂದಿದ್ದಾರೆ ಆದರೆ ನಾವು ಯಾವುದೇ ದೇಣಿಗೆ ಪಡೆದಿಲ್ಲ ಒಂದು ವೇಳೆ ನಮ್ಮ ಹೋರಾಟದಿಂದ ನಾವು ಒಂದೇ ಒಂದು ರೂಪಾಯಿ ದೇಣಿಗೆ ಸಂಗ್ರಹಿಸಿದ್ದೇವೆ ಎಂಬುದು ಸಾಬೀತಾದರೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರುವು ದಿಲ್ಲ ಎಂದರು.

ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಳನೇ ವೇತನ ಆಯೋಗ ಜಾರಿಗೆ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಆರ್ಥಿಕವಾಗಿ ನೌಕರರಿಗೆ ಸಹಾಯವಾ ಗಲಿದೆ.ಹಣದುಬ್ಬರ ಸಂದರ್ಭದಲ್ಲಿ ಸಿಗುವ ವೇತನ ಹೆಚ್ಚಳ, ತುಟ್ಟಿಭತ್ಯೆಯಂತ ನೀರ್ಧಾರಗ ಳಿಂದ ಅನುಕೂಲವಾಗಲಿದೆ ಎಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.