7ನೇ ವೇತನ ವಿಚಾರ ಕುರಿತಂತೆ ಶೀಘ್ರದಲ್ಲೇ CM ಜೊತೆ ಪೈನಲ್ ಸಭೆ – ಆಯೋಗ ವರದಿ ನೀಡುವ ಮುನ್ನವೇ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದ ಷಡಾಕ್ಷರಿಯವರು…..

Suddi Sante Desk
7ನೇ ವೇತನ ವಿಚಾರ ಕುರಿತಂತೆ ಶೀಘ್ರದಲ್ಲೇ CM ಜೊತೆ ಪೈನಲ್ ಸಭೆ – ಆಯೋಗ ವರದಿ ನೀಡುವ ಮುನ್ನವೇ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದ ಷಡಾಕ್ಷರಿಯವರು…..

ಬೆಂಗಳೂರು

7ನೇ ವೇತನ ವಿಚಾರ ಕುರಿತಂತೆ ಶೀಘ್ರದಲ್ಲೇ CM ಜೊತೆ ಪೈನಲ್ ಸಭೆ – ಆಯೋಗ ವರದಿ ನೀಡುವ ಮುನ್ನವೇ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದ ಷಡಾಕ್ಷರಿಯ ವರು.

7ನೇ ವೇತನ ಆಯೋಗದ ವಿಚಾರ ಕುರಿತಂತೆ ಶೀಘ್ರದಲ್ಲೇ ಮುಖ್ಯಮಂತ್ರಿ ಯವರೊಂದಿಗೆ ಮಾತುಕತೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು ಹೇಳಿದರು.ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ಯಾರಂಟಿಯಲ್ಲಿ ಸರ್ಕಾರಿ ನೌಕರರಿಗೆ ವೇತನದ ಸಮಸ್ಯೆ ಬರಲ್ಲ ಸರ್ಕಾರ ಈಗಾಗಲೇ ನಮಗೆ ಶೇ.17ರಷ್ಟು ವೇತನ ಹೆಚ್ಚಿಸಿದೆ

ರಾಜ್ಯದ ಬಜೆಟ್‌ 3.25 ಲಕ್ಷ ಕೋಟಿ ರೂ ಇದೆ. ಸರ್ಕಾರಕ್ಕೆ ನೌಕರರ ವೇತನ ದೊಡ್ಡ ಮೊತ್ತವಲ್ಲ. ಆಯೋಗ ಶಿಫಾರಸು ಮಾಡುವಷ್ಟು ನಮಗೆ ಕೊಟ್ಟರೆ ಮುಗಿಯುತ್ತದೆ ಎಂದರು. ಇನ್ನೂ ಹಿಂದಿನ ಸರ್ಕಾರ ವರದಿ ಬಂದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದಿತ್ತು ನಾವು 40 ಪರ್ಸೆಂಟ್‌ ವೇತನ ಕೇಳಿದ್ದೇವೆ ಆಯೋಗ ಶಿಫಾರಸು ಮಾಡಿದ ಮೇಲೆ ನಾವು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ ಖಂಡಿತವಾಗಿಯೂ ಈ ಒಂದು ವಿಚಾರದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ನ್ಯಾಯ ಸೂಕ್ತವಾದ ವೇತನ ನೀರಿಕ್ಷೆ ಮಾಡಿದಷ್ಟು ಸಿಗಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಒಂದು ಸಂದರ್ಭದಲ್ಲಿ ರಾಜ್ಯಾಧ್ಯಕ್ಷರೊಂದಿಗೆ ಸಂಘಟನೆಯ ರಾಜ್ಯ ನಾಯಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.