ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಷಡಾಕ್ಷರಿ ಅವರು ರಾಜ್ಯದ ಸರ್ಕಾರಿ ನೌಕರರಿಗೂ ಇನ್ನು ಮುಂದೆ ಸಿಗಲಿವೆ ರಿಯಾಯಿತಿ ದರದಲ್ಲಿ

Suddi Sante Desk

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಶೀಘ್ರದಲ್ಲೇ ಆರಂಭ ವಾಗಲಿದೆ ಸ್ಮಾರ್ಟ್ ಕ್ಯಾಂಟೀನ್ ಹೌದು ಇಂತಹದೊಂದು ಶುಭ ಸುದ್ದಿಯೊಂದನ್ನು ರಾಜ್ಯದ ಸರ್ಕಾರಿ ನೌಕರರಿಗೆ ಷಡಾಕ್ಷರಿ ಅವರು ನೀಡಿದ್ದಾರೆ ಈಗಾಗಲೇ ವೇತನ ಆಯೋಗದ ನಿರೀಕ್ಷೆ ಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ

ಶಿವಮೊಗ್ಗದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಕಚೇರಿ ಹಿಂಭಾಗದಲ್ಲಿ ಸ್ಮಾರ್ಟ್ ಕ್ಯಾಂಟೀನ್ ಆರಂಭವಾಗಲಿದ್ದು ಶೇಕಡ 20 ರಿಂದ 50ರ ರಿಯಾಯಿತಿ ದರದಲ್ಲಿ 500ಕ್ಕೂ ಹೆಚ್ಚು ದಿನ ಬಳಕೆ ವಸ್ತುಗಳು ಇಲ್ಲಿ ಲಭ್ಯವಾಗಲಿವೆ ಎಂದು ಷಡಾಕ್ಷರಿ ಅವರು ಹೇಳಿದರು

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಶಿವಮೊಗ್ಗದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು

ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯದಲ್ಲಿ ಎ ಪ್ಲಸ್ ಗ್ರೇಡ್ ಹೊಂದಿದ್ದು ಐದನೇ ಬಡಾವಣೆಯನ್ನು ನಿರ್ಮಾಣ ಮಾಡಲಾ ಗುತ್ತಿದೆ ಅಲ್ಲದೆ ಆರೋಗ್ಯ ಸಂಜೀವಿನಿ ಯೋಜನೆ ಶೀಘ್ರದಲ್ಲೇ ಜಾರಿಯಾಗುತ್ತದೆ ಇದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿವೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.