ವರ್ಗಾವಣೆಗೊಂಡ ಶಿಕ್ಷಕರ ಪರ ಧ್ವನಿ ಎತ್ತಿದ ಸಿದ್ದಣ್ಣ ಉಕ್ಕಲಿ ಸುದ್ದಿ ಸಂತೆ ಯ ವರದಿಗೆ ಸ್ಪಂದನೆ…..

Suddi Sante Desk

ವಿಜಯಪುರ –

ಒಂದು ಕಡೆ ವರ್ಗಾವಣೆ ಗಾಗಿ ಶಿಕ್ಷಕರ ಪರದಾಟ ಮತ್ತೊಂದು ಕಡೆ ವರ್ಗಾವಣೆ ಗೊಂಡರು ಬಿಡುಗಡೆ ಮಾಡದಂತೆ ಸೂಚನೆ ನೀಡಿರುವ ಅಧಿಕಾರಿಗಳು ಈ ಒಂದು ವಿಚಾರ ಕುರಿತು ಸುದ್ದಿ ಸಂತೆ ನ್ಯೂಸ್ ವರ್ಗಾವಣೆ ಗೊಂಡ ಶಿಕ್ಷಕರಿಗೆ ಎದುರಾಗಿದೆ ಮತ್ತೊಂದು ಆತಂಕ ಎಂಬ ತಲೆ ಬರಹದ ಮೇಲೆ ವರದಿಯೊಂದು ಪ್ರಕಟಗೊಂಡಿತ್ತು ಈ ಒಂದು ವರದಿ ಪ್ರಕಟಗೊಂಡ ಬೆನ್ನಲ್ಲೇ ವಿಜಯಪುರ ಜಿಲ್ಲೆಯ ಸರ್ಕಾರಿ ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಣ್ಣ ಎಚ್ ಉಕ್ಕಲಿ ಸ್ಪಂದಿಸಿ ಶಿಕ್ಷಕರ ಪರವಾಗಿ ಧ್ವನಿ ಎತ್ತಿ ಮಾತನಾಡಿದ್ದಾರೆ

ಹೌದು ವಿಜಯಪುರ ಜಿಲ್ಲೆಯ ಶಿಕ್ಷಕರ ಕುರಿತು ಸಮಸ್ಯೆ ಗಳ ಮೇಲೆ ಸುದ್ದಿ ಸಂತೆ ವರದಿ ಯೊಂದನ್ನು ಪ್ರಸಾರ ಮಾಡಿದ ಬೆನ್ನಲ್ಲೇ ಸಿದ್ದಣ್ಣ ಉಕ್ಕಲಿ ಅವರು ಜಿಲ್ಲೆಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಸಮಸ್ಯೆ ಪರಿಹಾರಕ್ಕೆ ಒತ್ತಾಯ ಮಾಡಿ ವರ್ಗಾವಣೆ ಗೊಂಡು ಆತಂಕದಲ್ಲಿದ್ದ ಶಿಕ್ಷಕರಿಗೆ ಆತ್ಮ ಸ್ಥೈರ್ಯ ವನ್ನು ತುಂಬಿದ್ದಾರೆ

ಇನ್ನೂ ಕೇವಲ ಹೆಸರಿಗೆ ಮಾತ್ರ ಜಿಲ್ಲಾ ಅಧ್ಯಕ್ಷ ರಾಗಿ ಇರದೆ ಇವರು ಸುದ್ದಿ ಸಂತೆ ಯಲ್ಲಿ ವರದಿ ಬಂದ ಕೂಡಲೇ ಅದಕ್ಕೆ ಸ್ಪಂದಿಸಿ ಅದರಲ್ಲೂ ತಮ್ಮ ಜಿಲ್ಲೆಯ ಶಿಕ್ಷಕರ ಬಗ್ಗೆ ವರದಿ ನೋಡಿ ಕೂಡಲೇ ಸಿದ್ದಣ್ಣ ಎಚ್ ಉಕ್ಕಲಿ ಅವರು ಮಾತನಾಡಿ ಅಧ್ಯಕ್ಷರು ಸರ್ಕಾರಿ ಗ್ರಾಮೀಣ ಶಿಕ್ಷಕರ ಸಂಘ ವಿಜಯಪುರ ಹುದ್ದೆಗೆ ತಕ್ಕಂತೆ ಕಾರ್ಯ ಮಾಡಿ ಶಿಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.