ಬದುಕು ಕಟ್ಟಿಕೊಟ್ಟ ಸರ್ಕಾರಿ ಶಾಲೆಗೆ ನೆರವಾದ ನಿವೃತ್ತ BEO – ತಮ್ಮೂರಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಮಾರ್ಟ್ ಕಲಿಕೆ ಆರಂಭ ಮಾಡಿದ ಸಿದ್ದಪ್ಪ ಉಗ್ರಾಣ ಕಾರ್ಯಕ್ಕೆ ಮೆಚ್ಚುಗೆ…..

Suddi Sante Desk
ಬದುಕು ಕಟ್ಟಿಕೊಟ್ಟ ಸರ್ಕಾರಿ ಶಾಲೆಗೆ ನೆರವಾದ ನಿವೃತ್ತ BEO – ತಮ್ಮೂರಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಮಾರ್ಟ್ ಕಲಿಕೆ ಆರಂಭ ಮಾಡಿದ ಸಿದ್ದಪ್ಪ ಉಗ್ರಾಣ ಕಾರ್ಯಕ್ಕೆ ಮೆಚ್ಚುಗೆ…..

ಕೋಲಾರ

ಕೋಲಾರ ದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಯೊಬ್ಬರು ಸರ್ಕಾರಿ ಶಾಲೆಗೆ ನೆರವು ನೀಡಿದ್ದಾರೆ ತಾಲ್ಲೂಕಿನ ಕುಪಕಡ್ಡಿಯ ನಿವೃತ್ತ ಶಿಕ್ಷಣಾಧಿಕಾರಿ ಸಿದ್ದಪ್ಪ ಉಗ್ರಾಣ, ತಮ್ಮೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲು ಅನುಕೂಲ ವಾಗುವ ನಿಟ್ಟಿನಲ್ಲಿ ಸ್ಮಾರ್ಟ್ ರೂಂಗೆ ಅಗತ್ಯವಾದ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ತಾವು ಕಲಿತ ಶಾಲೆಗೆ ಸೇವಾ ಮನೋಭಾವದ ದೃಷ್ಟಿ ಯಿಂದ ಸ್ಮಾರ್ಟ್ ರೂಂನ ಸೌಲಭ್ಯಗಳಿಗಾಗಿ ₹1.5 ಲಕ್ಷ ವೆಚ್ಚದಲ್ಲಿ ಪ್ರೊಜೆಕ್ಟರ್, ಪರದೆ, ಸೌಂಡ್ ಸಿಸ್ಟಮ್, ಲ್ಯಾಪ್‌ಟಾಪ್, ಟೇಬಲ್, ಮ್ಯಾಟ್, ಕಿಟಕಿ ಪರದೆ ಸೇರಿದಂತೆ ಸಂಪೂರ್ಣವಾಗಿ ಅತ್ಯುತ್ತಮ ಸೌಲಭ್ಯ ಗಳನ್ನು ಒಳಗೊಂಡ ಸಾಮಗ್ರಿಗಳನ್ನು ದೇಣಿಯಾಗಿ ನೀಡಿದ್ದಲ್ಲದೆ, ತಾವೇ ಮುಂದೆ ನಿಂತು ಸ್ಮಾರ್ಟ್ ರೂಂ ನಿರ್ಮಿಸಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದಾರೆ.

ಈ ಒಂದು ಸೇವೆಗೆ ಗ್ರಾಮದ ಹಿರಿಯರು ಕ್ಷೇತ್ರ ಶಿಕ್ಷಣಾ ಧಿಕಾರಿ ವಸಂತ ರಾಠೋಡ, ಶಿಕ್ಷಣ ಸಂಯೋಜಕ ವಿಜಯೇಂದ್ರ ಪುರೋಹಿತ, ಸಿ.ಆರ್.ಪಿ.ಗಳಾದ ಸಂಗಮೇಶ ಜಂಗಮಶೇಟ್ಟಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುರಿಗೇಶ ಹಳ್ಳಿ, ಮುಖ್ಯಶಿಕ್ಷಕ ಸಿದ್ದು ಕೋಟ್ಯಾಳ ಸೇರಿದಂತೆ ಸರ್ವ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.

ನಮ್ಮ ಬದುಕನ್ನು ಕಟ್ಟಿಕೊಟ್ಟಿ ಈ ದೇವಾಲಯಕ್ಕೆ ನನ್ನ ಕೈಯಿಂದ ಸ್ವಲ್ಪ ಕಾಣಿಕೆ ನೀಡಿದ್ದು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಖುಷಿಯಾಗಿದೆ ನಮ್ಮೂರ ಶಾಲೆ ಸುಂದರವಾಗಿದ್ದರೆ ನಮ್ಮ ಮಕ್ಕಳಿಗೆ ಅದುವೇ ಬೆಳಕಾ ಗುತ್ತದೆ ಎಂದು ಸಿದ್ದಪ್ಪ ಉಗ್ರಾಣ ಹೇಳಿತ್ತಾ ಮಾದರಿ ಯಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕೋಲಾರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.