ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಬೃಹತ್ ಪ್ರತಿಭಟನೆಗೆ ಕರೆ ನೀಡಿದ ಶಿವಾನಂದ ಕರಿಗಾರ – ಶಿವಾನಂದ ಕರಿಗಾರ,ಕೆ ಎನ್ ಗಡ್ಡಿ ನೇತ್ರತ್ವದಲ್ಲಿ ನಡೆಯಲಿದೆ ರೈತರ ಬೃಹತ್ ಪ್ರತಿಭಟನೆ

Suddi Sante Desk
ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಬೃಹತ್ ಪ್ರತಿಭಟನೆಗೆ ಕರೆ ನೀಡಿದ ಶಿವಾನಂದ ಕರಿಗಾರ – ಶಿವಾನಂದ ಕರಿಗಾರ,ಕೆ ಎನ್ ಗಡ್ಡಿ ನೇತ್ರತ್ವದಲ್ಲಿ ನಡೆಯಲಿದೆ ರೈತರ ಬೃಹತ್ ಪ್ರತಿಭಟನೆ

ನವಲಗುಂದ

ರೈತರ ಕೆಲವೊಂದಿಷ್ಟು ಬೇಡಿಕೆಗಳನ್ನು ಈಡೇರಿ ಸುವಂತೆ ಒತ್ತಾಯಿಸಿ ಮಾಜಿ ಸಚಿವ ಕೆ ಎನ್ ಗಡ್ಡಿ ಮತ್ತು ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರಿಗಾರ ನೇತ್ರತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಯಲಿದೆ.ಹೌದು ಡಿಸೆಂಬರ್ 20 ರಂದು ಧಾರವಾಡದ ನವಲಗುಂದ ಪಟ್ಟಣದಲ್ಲಿ ಈ ಒಂದು ಬೃಹತ್ ಪ್ರತಿಭಟನೆ ನಡೆಯಲಿದೆ.

ಸಂಪೂರ್ಣವಾಗಿ ಸಾಲ ಮನ್ನಾ ಬೆಳೆ ವಿಮೆ ಸೇರಿದಂತೆ ಐದಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಈ ಒಂದು ಪ್ರತಿಭಟನೆಯನ್ನು ಮಾಡಲಾಗುತ್ತಿದೆ.ಮಾಜಿ ಸಚಿವ ಕೆ ಎನ್ ಗಡ್ಡಿ ಮತ್ತು ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರಿಗಾರ ನೇತ್ರತ್ವದಲ್ಲಿ ಈ ಒಂದು ಪ್ರತಿಭಟನೆ ನಡೆಯಲಿದ್ದು ರೈತ ಭವನದಿಂದ ಆರಂಭಗೊಂಡ ಪ್ರತಿಭಟನೆಯಲ್ಲಿ ಜಿಲ್ಲೆಯ ತಾಲ್ಲೂಕಿನ ರೈತರು ಪಾಲ್ಗೊಳ್ಳಲಿದ್ದು ಇದರೊಂ ದಿಗೆ ಪಕ್ಷದ ಕಾರ್ಯಕರ್ತರು ಮುಖಂಡರು ಕೂಡಾ ಪಾಲ್ಗೊಳ್ಳಲಿದ್ದಾಲೆ ಎಂದು ಶಿವಾನಂದ ಕರಿಗಾರ ಹೇಳಿದರು.ಇನ್ನೂ ರೈತ ಭವನದಿಂದ ಆರಂಭಗೊಂಡ ಪ್ರತಿಭಟನೆ ಪಟ್ಟಣದಲ್ಲಿ ಸಾಗಿ ನಂತರ ತಹಶೀಲ್ದಾರ ಕಚೇರಿಗೆ ಆಗಮಿಸಿ ಮನವಿಯನ್ನು ಸಲ್ಲಿಸುವ ಯೋಜನೆಯನ್ನು ಹೋರಾಟಗಾರರು ಹಮ್ಮಿಕೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.