SSLC ಪರೀಕ್ಷೆಯ ಪೈನಲ್ ವೇಳಾಪಟ್ಟಿ ಪ್ರಕಟ – ಮಾರ್ಚ್ 31 ರಿಂದ ಪರೀಕ್ಷೆ ಆರಂಭ ಪೈನಲ್ ವೇಳಾಪಟ್ಟಿ ಹೀಗಿದೆ…..

Suddi Sante Desk
SSLC ಪರೀಕ್ಷೆಯ ಪೈನಲ್ ವೇಳಾಪಟ್ಟಿ ಪ್ರಕಟ – ಮಾರ್ಚ್ 31 ರಿಂದ ಪರೀಕ್ಷೆ ಆರಂಭ ಪೈನಲ್ ವೇಳಾಪಟ್ಟಿ ಹೀಗಿದೆ…..

ಬೆಂಗಳೂರು –

SSLC  ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ್ದು ಮಾರ್ಚ್ 31 ರಿಂದ ಪರೀಕ್ಷೆ ಗಳು ಆರಂಭವಾಗಲಿದ್ದು ಪ್ರಥಮ ಭಾಷೆಯ ಪರೀಕ್ಷೆ ಮಾರ್ಚ್‌ 31ಕ್ಕೆ ನಡೆಯಲಿದೆ ಈ ಮೊದಲು ಏಪ್ರಿಲ್‌ 3ಕ್ಕೆ ನಿಗದಿಯಾಗಿದ್ದ ಮಹಾವೀರ ಜಯಂತಿಯ ಸಾರ್ವತ್ರಿಕ ರಜೆ ಯನ್ನು ಏಪ್ರಿಲ್‌ ನಾಲ್ಕಕ್ಕೆ ಸರ್ಕಾರ ಮರು ನಿಗದಿ ಪಡಿಸಿತ್ತು.

ಈ ಹಿನ್ನೆಲೆಯಲ್ಲಿ ಏಪ್ರಿಲ್‌ ನಾಲ್ಕಕ್ಕೆ ನಿಗದಿಯಾ ಗಿದ್ದ ಗಣಿತ ಮತ್ತು ಸಮಾಜ ಶಾಸ್ತ್ರ ಪರೀಕ್ಷೆಯ ದಿನಾಂಕದಲ್ಲಿ ಬದಲಾವಣೆ ಮಾಡುವ ಅನಿವಾ ರ್ಯತೆ ಸೃಷ್ಟಿಯಾಗಿತ್ತು.ಈ ಹಿನ್ನೆಲೆಯಲ್ಲಿ ಏಪ್ರಿಲ್‌ 1 ಕ್ಕೆ ನಿಗದಿಯಾಗಿದ್ದ ಪ್ರಥಮ ಭಾಷೆಯ ಪರೀಕ್ಷೆ ಯನ್ನು ಮಾ.31ಕ್ಕೆ ಮುಂದೂಡಲಾಗಿದೆ.ಏಪ್ರಿಲ್‌ 4 ಕ್ಕೆ ನಿಗದಿಯಾಗಿದ್ದ ಗಣಿತ ಮತ್ತು ಸಮಾಜ ಶಾಸ್ತ್ರ ಪರೀಕ್ಷೆಯನ್ನು ಏ. 3ಕ್ಕೆ ಮರು ನಿಗದಿ ಮಾಡಲಾಗಿದೆ.ಹಾಗೆಯೇ ಗಣಿತ ಮತ್ತು ಸಮಾಜ ಶಾಸ್ತ್ರ ಪರೀಕ್ಷೆ ಏಪ್ರಿಲ್‌ 3ಕ್ಕೆ ನಡೆಯಲಿದೆ.

ಏ.15ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾ ಯಗೊಳ್ಳಲಿದೆ.ಹೆಚ್ಚಿನ ಮಾಹಿತಿಗೆ https://sslc.karnataka.gov.in/ ವೆಬ್‌ಸೈಟ್‌ ನೋಡಬಹುದು.

ಇನ್ನೂ ಎಲ್ಲಾ ಪರೀಕ್ಷೆಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರ ವರೆಗೆ ನಡೆಯಲಿದೆ.ಕೋರ್‌ ವಿಷಯಗಳಲ್ಲಿ ಸಂಗೀತ ವಿಷಯದ ಪರೀಕ್ಷೆಗಳು ಮಾತ್ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ ನಡೆಯಲಿದೆ.ಎನ್‌ಎಸ್‌ಕ್ಯೂಎಫ್‌ ಪರೀಕ್ಷೆ ಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.45ರ ವರೆಗೆ ನಡೆಯಲಿದೆ.ಏ.15ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾಯಗೊಳ್ಳಲಿದೆ.ಹೆಚ್ಚಿನ ಮಾಹಿತಿಗೆ https://sslc.karnataka.gov.in/ ವೆಬ್‌ಸೈಟ್‌ ನೋಡಬಹುದು.

ಪರಿಷ್ಕೃತ ವೇಳಾಪಟ್ಟಿ ಈ ಕೆಳಗಿನಂತೆ ಇದೆ
ಮಾ.31 ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌, ಸಂಸ್ಕೃತ
ಏ.3 ಗಣಿತ,ಸಮಾಜ ಶಾಸ್ತ್ರ
ಏ.6 ದ್ವಿತೀಯ ಭಾಷೆ: ಇಂಗ್ಲಿಷ್‌, ಕನ್ನಡ
ಏ.8 ಕೋರ್‌ ವಿಷಯ: ಎಲೆಮೆಂಟ್ಸ್‌ ಆಫ್‌ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌, ಮೆಕಾನಿಕಲ್‌, ಎಲೆಕ್ಟ್ರಿಕಲ್‌, ಇಂಜಿನಿಯರಿಂಗ್‌ ಗ್ರಾಫಿಕ್ಸ್‌, ಪ್ರೋಗ್ರಾಮಿಂಗ್‌ – ಎಲಿಮೆಂಟ್ಸ್‌ ಆಫ್‌ ಕಂಪ್ಯೂಟರ್‌ ಸೈನ್ಸ್‌.ಆರ್ಥಶಾಸ್ತ್ರ
ಏ.10 ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
ಏ.12 ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲೀಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು. ಎನ್‌ಎಸ್‌ಕ್ಯೂಎಫ್‌ ವಿಷಯಗಳು- ಮಾಹಿತಿ ತಂತ್ರಜ್ಞಾನ, ರೀಟೇಲ್‌, ಆಟೋಮೊಬೈಲ್‌, ಹೆಲ್ತ್‌ ಕೇರ್‌, ಬ್ಯೂಟಿ ಆಯಂಡ್‌ ವೆಲ್‌ನೆಸ್‌.
ಏ.15 ಸಮಾಜ ವಿಜ್ಞಾನ

ಹೀಗೆ ಪರೀಕ್ಷಾ ವೇಳಾಪಟ್ಟಿ ಇದ್ದಿದ್ದು ಈಗಾಗಲೇ ಪರೀಕ್ಷೆ ಬರೆಯಲು ಸಿದ್ದವಾಗಿರುವ ವಿದ್ಯಾರ್ಥಿ ಗಳಿಗೆ ಒಳ್ಳೆಯ ದಾಗಲಿ 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.