ಬೆಂಗಳೂರು –
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಕಾರ್ಯಕಾರಣಿ ಸಮಿತಿಯ ಸಭೆಯನ್ನು ಕರೆ ಯಲಾಗಿದೆ.ಹೌದು ಜನೆವರಿ 17 ರಂದು ಬೆಂಗ ಳೂರಿನ ಕಬ್ಬನ ಉದ್ಯಾನವನ ದ ಮಧ್ಯಾಹ್ನ 12 ಗಂಟೆಗೆ ಈ ಒಂದು ಸಭೆಯನ್ನು ಕರೆಯಲಾಗಿದೆ.
ಪ್ರಮುಖವಾಗಿ 7ನೇ ವೇತನ ಆಯೋಗಕ್ಕೆ ರಾಜ್ಯದ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಮಾಹಿತಿಯನ್ನು ನೀಡುವ ವಿಚಾರ ಕುರಿತಂತೆ,ಹಾಗೇ ಹೊಸ ಪಿಂಚಣಿ ಯೋಜನೆ ಯನ್ನು ರದ್ದು ಮಾಡಿ ಹಳೆ ಪಿಂಚಣಿ ಯೋಜನೆ ಯನ್ನು ಜಾರಿಗೆ ತರುವ ಕುರಿತಂತೆ ಹೋರಾಟ ಹಾಗೇ ಸಂಜೀವಿನಿ ಯೋಜನೆ ಅನುಷ್ಠಾನ,
ಸಂಘದ ವಾರ್ಷಿಕ ಸದಸ್ಯತ್ವ ಶುಲ್ಕ ಸಂಗ್ರಹಣೆ, ಹಾಗ ಕ್ರೀಡಾ ಸಾಂಸ್ಕ್ಕ್ರತಿಕ ಸ್ಪರ್ಧೆಗಳ ಆಯೋ ಜನೆ ಕುರಿತಂತೆ ಇದರೊಂದಿಗೆ ಇನ್ನೂ ಕೆಲವೊಂ ದಿಷ್ಟು ವಿಚಾರಗಳ ಕುರಿತಂತೆ ಈ ಒಂದು ಕಾರ್ಯಕಾರಣಿ ಸಭೆಯಲ್ಲಿ ಚರ್ಚೆಯನ್ನು ಮಾಡಲಾಗುತ್ತಿದೆ.
ಇನ್ನೂ ಈ ಒಂದು ಕಾರ್ಯಕಾರಣಿ ಸಭೆಗೆ ಆಮಂತ್ರಿತರು ತಪ್ಪದೇ ಬರುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……