ಬೆಂಗಳೂರು –
ಕೇಂದ್ರ ಸರ್ಕಾರದ ಬೆನ್ನಲ್ಲೇ ರಾಜ್ಯ ಸರ್ಕಾರವು ಕೂಡಾ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಳ ಮಾಡಿ ಅಧಿಕೃತ ವಾಗಿ ಆದೇಶವನ್ನು ಮಾಡಿದೆ
ಹೌದು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಕೇಂದ್ರ ಸರ್ಕಾರವು ತಮ್ಮ ನೌಕರರಿಗೆ 3 ರಷ್ಟು ಹೆಚ್ಚಿಳ ಮಾಡಿತ್ತು ಈ ಒಂದು ಕುರಿತು ರಾಜ್ಯದ ಸರ್ಕಾರಿ ನೌಕರರು ಅಸಮಾ ಧಾನ ವ್ಯಕ್ತಪಡಿಸಿದರು.ಜೊತೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಮನವಿ ನೀಡಿ ಮುಖ್ಯಮಂತ್ರಿ ಅವರಿಗೆ ಒತ್ತಾಯವನ್ನು ಮಾಡಿದ್ದರು ಇದರ ಬೆನ್ನಲ್ಲೇ ಈಗ ರಾಜ್ಯ ಸರ್ಕಾರ ತುಟ್ಟಿ ಭತ್ಯೆ ಯನ್ನು ಹೆಚ್ಚಳ ಮಾಡಿ ಆದೇಶವನ್ನು ಮಾಡಿದೆ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯ ಕ್ಷರಾದ ಸಿ ಎಸ್ ಷಡಕ್ಷರಿ ರವರ ಮನವಿ ಮೇರೆಗೆ ಶೇಕಡಾ 3% ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ಮಾಡಿದ ಸರಕಾರಕ್ಕೆ ರಾಜ್ಯಾಧ್ಯಕ್ಷರು ಧನ್ಯವಾದಗಳನ್ನು ಹೇಳಿದ್ದಾರೆ
ಒಟ್ಟಾರೆ ಹಬ್ಬದ ಮುಂಚೆ ರಾಜ್ಯದ ಸಮಸ್ತ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶವನ್ನು ಮಾಡಿದ್ದು ಸಂತೋಷದ ವಿಚಾರವಾಗಿದೆ