This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State Newsಬೆಂಗಳೂರು ನಗರ

7ನೇ ವೇತನ ಆಯೋಗದ ಅಧ್ಯಕ್ಷರ ನೇಮಕಾತಿಯ ಆದೇಶ ಮಾಡಿ – ಅಧ್ಯಕ್ಷರ ಘೋಷಣೆ ಮಾಡಿ ಆದೇಶಕ್ಕೆ ಯಾಕೇ ವಿಳಂಬ ರಾಜ್ಯ ಸರ್ಕಾರಿ ನೌಕರರ ಪ್ರಶ್ನೆ

7ನೇ ವೇತನ ಆಯೋಗದ ಅಧ್ಯಕ್ಷರ ನೇಮಕಾತಿಯ ಆದೇಶ ಮಾಡಿ – ಅಧ್ಯಕ್ಷರ ಘೋಷಣೆ ಮಾಡಿ ಆದೇಶಕ್ಕೆ ಯಾಕೇ ವಿಳಂಬ ರಾಜ್ಯ ಸರ್ಕಾರಿ ನೌಕರರ ಪ್ರಶ್ನೆ
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವನ್ನು ನೀಡುವ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಒಂದು ಸಮಿತಿಗೆ ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ಅವರನ್ನು ನೇಮಕ ಮಾಡಿ ಅವರ ಹೆಸರನ್ನು ಕೂಡಾ ಘೋಷಣೆ ಮಾಡಿ ದ್ದಾರೆ.ಈ ಒಂದು ಘೋಷಣೆಯ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ನೌಕರರ ಪರವಾಗಿ ರಾಜ್ಯಾಧ್ಯಕ್ಷ ಷಡಾಕ್ಷರಿ ಮತ್ತು ಟೀಮ್ ನವರು ಸಾವಿರಾರು ನೌಕರರ ಸಮ್ಮುಖದಲ್ಲಿಯೇ ಮುಖ್ಯಮಂತ್ರಿ ಮತ್ತು ಕೆಲ ಸಚಿವರನ್ನು ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿದ್ದಾರೆ

ಇಷ್ಟೇಲ್ಲಾ ಆದರೂ ಕೂಡಾ ಈವರೆಗೆ ಅಧಿಕೃತವಾಗಿ ಸಮಿತಿಗೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ ಕುರಿತಂತೆ ಸರ್ಕಾರದಿಂದ ಆದೇಶವಾಗಿಲ್ಲ ಈವರೆಗೆ ಕೇವಲ ಹೇಳಿಕೆ ಸನ್ಮಾನ ಸಮಾರಂಭ ಆಗಿದ್ದೇ ಹೊರತು ಆದೇಶವಾಗದಿರೊದು ಮತ್ತೊಂದು ಅನು ಮಾನವನ್ನು ಹುಟ್ಟುಹಾಕಿದೆ.ಇತ್ತ ಮುಖ್ಯಮಂತ್ರಿ ಸೂಚನೆಯ ನಂತರ ವೇತನ ಆಯೋಗದ ಅಧ್ಯಕ್ಷರು ಕೆಲ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಹೀಗಾಗಿ ಒಂದು ಕಡೆಗೆ ಸಂತೋಷ ವಾಗುತ್ತಿದ್ದರೆ ಇನ್ನೊಂದು ಕಡೆಗೆ ಈ ಕುರಿತಂತೆ ಈವರೆಗೆ ಒಂದು ವಾರ ಕಳೆದರೂ ಕೂಡಾ ಆದೇಶ ಬಾರದಿರೊದು ನೌಕರರ ಅನುಮಾನಕ್ಕೆ ಕಾರಣ ವಾಗಿದ್ದು

ಹೀಗಾಗಿ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಇಂದು ಆದರೂ ಈ ಕುರಿತಂತೆ ಸರ್ಕಾರಕ್ಕೆ ಮತ್ತೊಂದು ಬಾರಿ ಮಾತನಾಡಿ ಆದೇಶವನ್ನು ಮಾಡಿಸಿದರೆ ಅನುಮಾನದಲ್ಲಿರುವ ರಾಜ್ಯದ ಸರ್ಕಾರಿ ನೌಕರರ ಮುಖದಲ್ಲಿ ಮಂದಹಾಸ ಮೂಡುತ್ತದೆ.

ಈ ಒಂದು ಕೆಲಸ ವಿಳಂಬವಾದರೆ ಮುಂದಿನ ಕಾರ್ಯ ಚಟುವಟಿಕೆಗಳಿಗೆ ತೊಂದರೆಯಾಗ ಲಿದ್ದು ಹೀಗಾಗಿ ಈ ಕೂಡಲೇ ರಾಜ್ಯಾಧ್ಯಕ್ಷರು ಈ ಒಂದು ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆದೇಶ ಹೊರಡಿಸುವ ವಿಚಾರಕ್ಕೆ ಮುಂದಾಗಲಿದೆ ಎಂಬೊದು ಸಮಸ್ತ ರಾಜ್ಯ ಸರ್ಕಾರಿ ನೌಕರರು ಒತ್ತಾಯವಾಗಿದೆ

ಚಕ್ರವರ್ತಿ ಜೊತೆ ಮಂಜುನಾಥ ಬಡಿಗೇರ ಸುದ್ದಿ ಸಂತೆ ನ್ಯೂಸ್


Google News

 

 

WhatsApp Group Join Now
Telegram Group Join Now
Suddi Sante Desk