CM ಗೆ ಮತ್ತೆ ಅಭಿನಂದನೆ ಸಲ್ಲಿಸಲು ಮುಂದಾದ ರಾಜ್ಯ ಸರ್ಕಾರಿ ನೌಕರರ ಸಂಘಟನೆ – ನೀತಿ ಸಂಹಿತೆ ಮುಂಚಿತವಾಗಿ 7 ನೇ ವೇತನ ವರದಿ ತರಿಸಿಕೊಳ್ಳಿ ಆದೇಶ ಮಾಡಿಸಿ ಮಾತು ಉಳಿಸಿಕೊಳ್ಳಿ CM ಸಾಹೇಬ್ರೆ…..

Suddi Sante Desk
CM ಗೆ ಮತ್ತೆ ಅಭಿನಂದನೆ ಸಲ್ಲಿಸಲು ಮುಂದಾದ ರಾಜ್ಯ ಸರ್ಕಾರಿ ನೌಕರರ ಸಂಘಟನೆ – ನೀತಿ ಸಂಹಿತೆ ಮುಂಚಿತವಾಗಿ 7 ನೇ ವೇತನ ವರದಿ ತರಿಸಿಕೊಳ್ಳಿ ಆದೇಶ ಮಾಡಿಸಿ ಮಾತು ಉಳಿಸಿಕೊಳ್ಳಿ CM ಸಾಹೇಬ್ರೆ…..

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರದ ರೂಪದಲ್ಲಿ 17 ರಷ್ಟು ವೇತನವನ್ನು ಹೆಚ್ಚಳ ಮಾಡಿ ಆದೇಶ ಮಾಡಿದ ಮುಖ್ಯಮಂತ್ರಿ ಅವರಿಗೆ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಅಭಿನಂದನಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳ ಲಾಗಿದೆ. ಹೌದು ಮಾರ್ಚ್ 20 ರಂದು ಬೆಂಗಳೂರಿ ನ ವಿಧಾನ ಸೌಧ ದ ಬ್ಯಾಂಕ್ವೆಟ್ ಹಾಲ್ ನಲ್ಲಿ ಈ ಒಂದು ಸಮಾರಂಭವನ್ನು ಆಯೋಜಿಸಲಾಗಿದೆ

ರಾಜ್ಯದ ಸರ್ಕಾರಿ ನೌಕರರ ಸಂಘಟನೆ ಯ ಪರವಾಗಿ ಈ ಒಂದು ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಮುಖ್ಯಮಂತ್ರಿ ಅವರಿಗೆ ಮೊದಲು ಅಭಿನಂದನೆ ಸಲ್ಲಿಸಿ ನಂತರ ಮಹಿಳಾ ದಿನಾಚರಣೆ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ.

ಸರಿ ಇದು ಒಳ್ಳೆಯ ವಿಚಾರ ಆದರೆ ಇನ್ನೇನು ಒಂದು ವಾರ ಕಳೆದರೆ ರಾಜ್ಯದ ವಿಧಾನ ಸಭೆ ಗೆ ಚುನಾವಣೆ ಘೋಷಣೆ ಯಾಗಲಿದೆ.ಹೀಗಾಗಿ ಚುನಾವಣೆ ಘೋಷಣೆ ಮುನ್ನ 7 ನೇ ವೇತನ ಆಯೋಗದ ವರದಿ ಪಡೆದು ಕೂಡಲೇ ಅದನ್ನು ಜಾರಿಗೆ ತರುವ ಕುರಿತು ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಹಾಗೇ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಒತ್ತಾಯ ಮಾಡುವ ನಿಟ್ಟಿನಲ್ಲಿ ಈ ಒಂದು ಕಾರ್ಯ ಆಗಲಿ ಅಂದಾಗ ಈ ಒಂದು ಕಾರ್ಯ ಕ್ರಮಕ್ಕೆ ಅರ್ಥ ಬರುತ್ತದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.