This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಕ.ರಾ.ಪ್ರಾ.ಶಾ.ಶಿ.ಸಂಘಕ್ಕೆ ರೂ.200 ₹ ಅಸಮ್ಮತಿಸಿದ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಶರಣಬಸವ.ಹೆಚ್ ಬನ್ನಿಗೋಳ ಮತ್ತು ಬಹು ಶಿಕ್ಷಕರು

WhatsApp Group Join Now
Telegram Group Join Now

ಯಾದಗಿರಿ –

ಕ.ರಾ.ಪ್ರಾ.ಶಾ.ಶಿ.ಸಂಘಕ್ಕೆ ರೂ.200 ರೂಪಾಯಿ ಸದಸ್ಯತ್ವ ಹಣವನ್ನು ಅಸಮ್ಮತಿಸಿದ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಶರಣಬಸವ.ಹೆಚ್ ಬನ್ನಿಗೋಳ ರವರೊಂದಿಗೆ ಬಹು ಶಿಕ್ಷಕರು ಇದನ್ನು ಸ್ವಾಗತಿಸಿದ ಅಶೋಕ ಎಮ್.ಸಜ್ಜನ.ಎಲ್.ಆಯ್.ಲಕ್ಕಮ್ಮನವರ.ಎಸ್.ಎಫ್.ಪಾಟೀಲ.ಅಕ್ಬರಲಿ ಸೊಲ್ಲಾಪೂರ.ಸಂಗಮೇಶ ಖನ್ನಿನಾಯ್ಕರ

ಹೌದು ಶಿಕ್ಷಕರ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿರುವ ಶಿಕ್ಷಕರ 200 ರೂಪಾಯಿ ಕಟಾವಣೆಗೆ ರಾಜ್ಯಾದ್ಯಂತ ಭಾರೀ ಬಿರುಸಿನ ಬಿರುಗಾಳಿ ಬೀಸುತ್ತಿದ್ದು ಬಹುತೇಕ ಶಿಕ್ಷಕರು ತಮ್ಮ ವೇತನದಲ್ಲಿ ಹಣ ಕಟಾವಣೆ ಮಾಡದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಕೊಡುತ್ತಿ ದ್ದಾರೆ. ಅಂದಾಜು 10.15.20.25.30 ವರ್ಷಗಳ ಕಾಲ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸರಕಾರ ಹಾಗೂ ಇಲಾಖೆಯ ಅನುಮತಿಯೊಂದಿಗೆ ಎಲ್ಲಾ ಪದವಿಗಳನ್ನು ಪಡೆದು ಜೊತೆಗೆ ಬಿ.ಈಡಿ ಶಿಕ್ಷಣ ಪಡೆದು ಸೇವೆ ಸಲ್ಲಿಸುತ್ತಿರುವ ಅಂದಾಜು ಎಂಬತ್ತು ಸಾವಿರ ಸೇವಾನಿರತ ಪದವೀಧರ ಶಿಕ್ಷಕರೆಲ್ಲರನ್ನು ಹಿಂಬಡ್ತಿ ನೀಡಿದ್ದು ತುಂಬಾ ವಿಷಾದನೀಯ ಸಂಗತಿ.

ಅಲ್ಲದೆ ಗ್ರಾಮೀಣ ಶಿಕ್ಷಕರಿಗೆ ನೀಡುವ ಗ್ರಾಮೀಣ ಪರಿಹಾರ ಭತ್ಯೆ ನಿಲ್ಲಿಸಿರುವುದು ಹಾಗೂ ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಗಳು ಮುಖ್ಯೋಪಾಧ್ಯಾಯರಿಗೆ ವಿಶೇಷ ವೇತನ ಶ್ರೇಣಿ ನೀಡದೇ ಇರುವುದು ಹಾಗೂ ಪ್ರಭಾರಿ ಮುಖ್ಯ ಗುರುಗಳಿಗೆ ವಿಶೇಷ ಭತ್ಯೆ ನೀಡದೆ ಇರುವುದು ತುಂಬಾ ನೋವಿನ ಸಂಗತಿಯಾಗಿ ರುತ್ತದೆ.ಇದಲ್ಲದೆ ಹಳೆ ಪಿಂಚಣಿಯಿಂದ ವಂಚಿತ ರಾದ 1-4-2006 ರಿಂದ ನೇಮಕವಾದ ಶಿಕ್ಷಕ ರಿಗೆ NPS ಜಾರಿಗೆ ಬಂದಿದ್ದು ಇದು ನೌಕರರಿಗೆ ತುಂಬ ಮಾರಕವಾಗಿದ್ದು ನಿವೃತ್ತಿ ನಂತರ ಕೇವಲ ೬ ನೂರು ರಿಂದ ೧೫ ನೂರು ರೂಪಾಯಿ ಪಡೆ ಯುವಂಥ ಪರಿಸ್ಥಿತಿ ಒದಗಿ ಬಂದಿರುತ್ತದೆ.

ಅಲ್ಲದೆ ಬಹು ದಿನಗಳಿಂದ ನನೆಗುದಿಗೆ ಬಿದ್ದಿರುವ ಜ್ವಲಂತ ಸಮಸ್ಯೆಗಳಲ್ಲಿ ವರ್ಗಾವಣೆ ಸಮಸ್ಯೆ ಇದ ರಿಂದ ಸಾವಿರಾರು ಶಿಕ್ಷಕರು ಮಾನಸಿಕವಾಗಿ ನೆಮ್ಮ ದಿಯನ್ನು ಕಳೆದುಕೊಂಡು ಜೀವನ ಸಾಗಿಸುತ್ತಿದ್ದಾರೆ ಅಲ್ಲದೆ ಕೆಲವು ಕುಟುಂಬಗಳು ವಿಚ್ಛೇದನ ಪಡೆಯು ವುವಂತ ಪರಿಸ್ಥಿತಿಗೆ ಬಂದಿವೆ.ದಕ್ಷಿಣ ಕರ್ನಾಟಕದ ಜಿಲ್ಲೆಗಳಿಂದ ಸಿಇಟಿ ಮೂಲಕ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೇಮಕಾತಿ ಹೊಂದಿ ತಮ್ಮ ಕುಟುಂಬದ ಸರ್ವ ಸದಸ್ಯರನ್ನು ತೊರೆದು ೫-೬ ನೂರು ಕಿ.ಮೀ ದೂರದಿಂದ ಬಂದು ಜೀವನ ನಡೆಸುತ್ತಿದ್ದಾರೆ . ಅಲ್ಲ ದೆ ಕುಟುಂಬದ ತಂದೆ- ತಾಯಿ ಸಹೋದರ, ಪತ್ನಿ ಯರ ಪ್ರೀತಿ ಹಾರೈಕೆ ಕಾಳಜಿಯಿಂದ ವಂಚಿತರಾಗಿ ವರ್ಗಾವಣೆಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದಾರೆ ಎಷ್ಟೋ ಶಿಕ್ಷಕರು ಕುಟುಂಬದ ಸದಸ್ಯರನ್ನು ಆರೈಕೆ ಮಾಡಲಾಗದೇ ಕಳೆದುಕೊಂಡಿದ್ದಾರೆ.ಹಾಗೂ ಸಾಮಾನ್ಯ ಕೋರಿಕೆ ವರ್ಗಾವಣೆ ಬಯಸುವವರು ಪತಿ-ಪತ್ನಿಯರು ತುಂಬಾ ವರ್ಷಗಳಿಂದ ದೂರವಿದ್ದು ಸಂಸಾರಿಕವಾಗಿ ತುಂಬಾ ನೋವನ್ನು ಅನುಭವಿಸು ತ್ತಿದ್ದಾರೆ ಇಂತಹ ಕೋವಿಡ್ ಪರಿಸ್ಥಿತಿಯಲ್ಲೂ ಸಹ ದೂರದಿಂದ ಬಂದಂತಹ ಶಿಕ್ಷಕರು ಹಗಲಿರುಳು ಕುಟುಂಬದ ಸದಸ್ಯರನ್ನು ನೆನೆಯುತ್ತಾ ಅಂಗೈಯಲ್ಲಿ ಜೀವ ಹಿಡಿದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹೀಗೆ ಹತ್ತಾರು ಸಮಸ್ಯೆಗಳು ಶಿಕ್ಷಕರನ್ನು ಕಾಡುತ್ತಿವೆ ಇವೆಲ್ಲಾ ಸಮಸ್ಯೆಗಳಿಗೆ ಮುಖ್ಯ ಕಾರಣವೇನೆಂದರೆ ಸುಮಾರು ನಲವತ್ತು ವರ್ಷಗಳ ಕಾಲ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪದಾಧಿಕಾರಿಗಳ ಐಷಾ ರಾಮಿ ಜೀವನ ಶಿಕ್ಷರ ಸಂಘದ ಸದಸ್ಯತ್ವದ ಶುಲ್ಕ ದಿಂದ ಹಾರ ತುರಾಯಿ ಮೋಜು ಮಸ್ತು ಸಭೆ ಸಮಾರಂಭ ಮಾಡುತ್ತ ಕಾಲಹರಣ ಮಾಡುತ್ತಾ ಶಿಕ್ಷಕರ ಸಮಸ್ಯೆಗಳಿಗೆ ಬಿಡಿ ಕಾಸು ಕಿಮ್ಮತ್ತು ನೀಡದೆ ಸಭೆ ಸಮಾರಂಭ ಹಾಗೂ ಫೋನ್ ಕರೆಗಳಲ್ಲಿ ಹಾರಿಕೆ ಉತ್ತರ ನೀಡುತ್ತಾ ಕಾಲ ಕಾಲಹರಣ ಮಾಡುತ್ತಿರುವುದು ರಾಜ್ಯದ ಸಮಸ್ತ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿರುತ್ತಾರೆ ಇಷ್ಟು ವರ್ಷ ತಾಳ್ಮೆ ಯಿಂದಿರುವ ಶಿಕ್ಷಕರು ಇಂದು ರಾಜ್ಯಾದ್ಯಂತ ಶಿಕ್ಷಕರು ಬೇಸತ್ತು ಪ್ರತಿವರ್ಷ ಈ ಸಂಘಕ್ಕೆ ಕಟಾವು ಮಾಡು ತ್ತಿರುವ ವಾರ್ಷಿಕ ಸದಸ್ಯತ್ವ ಹಣವನ್ನು ಇನ್ನು ಮುಂದೆ ಕಟಾವಣೆ ಮಾಡದಂತೆ ಲಿಂಗಸುಗೂರು ತಾಲ್ಲೂಕಿನ ಶಿಕ್ಷಕರು ಸಾಮೂಹಿಕವಾಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿ ತಮ್ಮ ವೇತನದಲ್ಲಿ ವಾರ್ಷಿಕ ಸದಸ್ಯತ್ವ ಶುಲ್ಕ ಕಟಾವಣೆ ಮಾಡಬೇಡಿರೆಂದು ಅಸಮ್ಮತಿ ಪತ್ರವನ್ನು ಸಲ್ಲಿಸಿದರು

ಈ ಸಂದರ್ಭದಲ್ಲಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ,ರಾಜ್ಯಘಟಕ ಹುಬ್ಬಳ್ಳಿಯ ರಾಜ್ಯ ಸಹಕಾರ್ಯದರ್ಶಿಗಳಾದ ಶರಣಬಸವ ಎಚ್ ಬನ್ನಿಗೋಳ ಹಾಗೂ ಪ್ರಾಥಮಿಕ ಶಾಲಾ ಪದವೀಧರ (೬-೮) ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಅಮರಯ್ಯ ಗೌರವಾಧ್ಯಕ್ಷ ರಾದ ರಾಯಪ್ಪ ನಾಗನೂರ್ ನಿರ್ದೇಶಕರುಗಳಾದ

ನಾಗರಾಜ್ ಬಸವರಾಜ್ ಮಲ್ಲಿಕಾರ್ಜುನಗೌಡ ದೌಲತ್ ಶಿವಪ್ಪ ಹಾಗೂ ಮಸ್ಕಿ ತಾಲ್ಲೂಕು ಜಿಪಿಟಿ ಅಧ್ಯಕ್ಷರಾದ ವೀರಪ್ಪ .ಪದಾಧಿಕಾರಿಗಳಾದ ದಾವ ಲ್ ಸಾಬ್ ಆದೇಶ ಶ್ರೀಕಾಂತ ಅನ್ವಯ ಅಪ್ಪಣ್ಣ ಮುಂತಾದ ಶಿಕ್ಷಕರೆಲ್ಲರೂ ಲಿಂಗಸೂರ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಾರ್ಯಾಲಯ ಇವರಿಗೆ ಸಾಮೂಹಿಕ ವಾಗಿ ಅಸಮ್ಮತಿ ಪತ್ರವನ್ನು ನೀಡುವುದರ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು ಈ ನಿಟ್ಟಿನ ಲ್ಲಿ ರಾಜ್ಯದ ಸಮಸ್ತ ಗುರುಬಳಗ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಇದಾಗಿದೆ ಎಂದು ರಾಜ್ಯದ ಶಿಕ್ಷಕರಲ್ಲಿ ವಿನಂತಿಸಿದರು


Google News

 

 

WhatsApp Group Join Now
Telegram Group Join Now
Suddi Sante Desk