ಕುಷ್ಟಗಿಯಲ್ಲಿ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಷಡಾಕ್ಷರಿ ಅವರಲ್ಲಿ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಮನವಿ – ಕಾರ್ಯಕ್ರಮ ದಲ್ಲಿ ರಾಜ್ಯಾಧ್ಯಕ್ಷರಿಗೆ ಮನವಿ ನೀಡಿ ಬೇಡಿಕೆ ಇಟ್ಟಿದ್ದೇನು ಗೊತ್ತಾ

Suddi Sante Desk


ಬೆಂಗಳೂರು –

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಷಡಕ್ಷರಿ ಯವರ ಟೀಮ್ ಹಾಗೂ ಉಳಿದ ಶಿಕ್ಷಕರ ಸಂಘಗಳ ಗಳಿಗೆ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಅವರು ಕಳಕಳಿಯ ಮನವಿ ಮಾಡಿಕೊಂಡಿ ದ್ದಾರೆ.ಹೌದು ಕುಷ್ಟಗಿಯಲ್ಲಿ ಇಂದು ನಡೆದ ಕಾರ್ಯಕ್ರಮ ದಲ್ಲಿ ಶಿಕ್ಷಕರ ಪ್ರಮುಖ ಬೇಡಿಕೆಯಾದ ಒನ್ ಟೈಮ್ ಸೆಟ್ಲ್ ಮೆಂಟ್ ಸ್ವಂತ ಜಿಲ್ಲೆಗೆ ಒಮ್ಮೆ ವರ್ಗಾವಣೆ ಕುರಿತಂತೆ ಮನವಿ ನೀಡಿ ಒತ್ತಾಯವನ್ನು ಮಾಡಿದ್ದಾರೆ.

ಹೌದು ಹಲ ವಾರು ತಿಂಗಳುಗಳಿಂದ ತಾವು ಡಾಟಾ ಕಲೆಕ್ಟ್ ಮಾಡಿ ಸರ್ಕಾರ ಮಟ್ಟದಲ್ಲಿ ನೀಡಿದ್ದು ಆದರೆ ಯಾವುದೇ ಕಾರ ಣಕ್ಕೂ ಈ ವರ್ಗಾವಣೆ ಮಾಡಲು ಸಾಧ್ಯವಿಲ್ಲವೆಂದು ಶಿಕ್ಷಣ ಸಚಿವರು ಸದನದಲ್ಲಿ ಹೇಳಿದ್ದಾರೆ.ಸರಿ ಆದರೆ ತಾವುಗಳು ಈ ತಕ್ಷಣ ಎಚ್ಚೆತ್ತುಕೊಂಡು ಬಹಳಷ್ಟು ಶಿಕ್ಷಕ ರಿಗೆ ತೊಂದರೆಗಳು ಇವೆ ಹೀಗಾಗಿ ನಾವು ಹದಿನೈದಿಪ್ಪತ್ತು ವರ್ಷಗಳ ಸೇವೆ ಸಲ್ಲಿಸಿದರೂ ನಮಗೆ ವರ್ಗಾವಣೆ ಯಿಂದ ಅನ್ಯಾಯವಾಗಿದೆ ಮಾನಸಿಕ ನೆಮ್ಮದಿ ಇಲ್ಲದಾಗಿದೆ ಅದ ಕ್ಕಾಗಿ ಸರ್ಕಾರಕ್ಕೆ ನೌಕರರ ಸಂಘ ಹಾಗೂ ಉಳಿದ ಸಂಘ ಗಳು ಒತ್ತಡ ಹಾಕಿ ಶಿಕ್ಷಕರಿಗೆ ಆಗುತ್ತಿರುವ ಈ ಅನ್ಯಾಯ ವನ್ನು ಸಚಿವರಿಗೆ ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿ ಕೊಟ್ಟು ಪಶ್ಚಿಮ ಬಂಗಾಳ ಮಾದರಿಯಲ್ಲಿ ಒಮ್ಮೆ ಸ್ವಂತ ಜಿಲ್ಲೆಗೆ ವರ್ಗಾವಣೆ ನೀಡಲು ಮಾನಸಿಕವಾಗಿ ತೃಪ್ತಿಕರ ವಾದ ಸೇವೆ ಸಲ್ಲಿಸಲು ಶೈಕ್ಷಣಿಕ ಹಿತದೃಷ್ಟಿಯಿಂದ ಈ ವರ್ಗಾವಣೆ ಕಾಯದೆ ಸುಗ್ರೀವಾಜ್ಞೆ ಮುಖಾಂತರವಾದರೂ ಜಾರಿಗೊಳಿಸಲ ಒತ್ತಡ ಹಾಕಬೇಕು ಈ ಆಡಂಬರ ಕಾರ್ಯ ಕ್ರಮಗಳನ್ನು ಬದಿಗೊತ್ತಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಕಳಕಳಿಯ ಮನವಿಯನ್ನು ನಾಡಿನ ಶಿಕ್ಷಕರ ಮತ್ತು ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಪರವಾಗಿ ರಾಜ್ಯಾಧ್ಯಕ್ಷರಾಗಿರುವ ಪವಾಡೆಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ. ಇಂದು ಕುಷ್ಟಗಿಯಲ್ಲಿ ನಡೆದ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ಶಿಕ್ಷಕರ ಶೇಕಡ 25 ವರ್ಗಾವಣೆ ನಿಯಮವನ್ನು ರದ್ದುಪಡಿಸುವುದು ಹಾಗೂ ಒನ್ ಟೈಮ್ ಸೆಟ್ಲ್ ಮೆಂಟ್ ಸ್ವಂತ ಜಿಲ್ಲೆಗೆ ಒಮ್ಮೆ ವರ್ಗಾವಣೆ ಸಿ 2 ಪ್ರಮುಖ ಬೇಡಿಕೆಗಳನ್ನು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಪವಾಡೆಪ್ಪ ಅವರ ನೇತೃತ್ವದಲ್ಲಿ ಶಿಕ್ಷಕರು ಮನವಿ ನೀಡಿದರು.ರಾಜ್ಯದ ಎಲ್ಲ ಶಿಕ್ಷಕರ ಪರವಾಗಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರಿಗೆ ನೀಡಲಾಯಿತು ಈ ಸಂದರ್ಭದಲ್ಲಿ ಶಿಕ್ಷಕ ಬಂಧುಗಳಾದ ರುದ್ರೇಶ್.ಮಂಜುನಾಥ್ ನಾಗಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.