ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು ಸ್ಟಾಪ್ ವೋಟ್ ಚೋರಿ ಕಾರ್ಯಕ್ರಮ – ಅನಿಲಕುಮಾರ ಪಾಟೀಲ್,ಅರ್ಜುನ್ ಪಾಟೀಲ್ ಅವರ ನೇತ್ರತ್ವದಲ್ಲಿನ ಹೋರಾಟಕ್ಕೆ ಸಾಥ್ ನೀಡಿದ್ರು ಪಕ್ಷದ ಯುವ ಕಾರ್ಯಕರ್ತರು ಮುಖಂಡರು…..

Suddi Sante Desk
ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು ಸ್ಟಾಪ್ ವೋಟ್ ಚೋರಿ ಕಾರ್ಯಕ್ರಮ – ಅನಿಲಕುಮಾರ ಪಾಟೀಲ್,ಅರ್ಜುನ್ ಪಾಟೀಲ್ ಅವರ ನೇತ್ರತ್ವದಲ್ಲಿನ ಹೋರಾಟಕ್ಕೆ ಸಾಥ್ ನೀಡಿದ್ರು ಪಕ್ಷದ ಯುವ ಕಾರ್ಯಕರ್ತರು ಮುಖಂಡರು…..

ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಯುವ ಕಾಂಗ್ರೆಸ್ ವತಿಯಿಂದ ಹುಬ್ಬಳ್ಳಿಯಲ್ಲಿ “ಸ್ಟಾಪ್ ವೋಟ್ ಚೋರಿ+ ಸ್ಟಿಕ್ಕರ್ ಅಭಿಯಾನವನ್ನು ಕೇಶವಪುರ ಸರೋಜಾ ಸರ್ಕಲ್ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಈ ಅಭಿಯಾನದ ಉದ್ದೇಶ ಜನರಲ್ಲಿ ಮತದಾನದ ಪ್ರಾಮುಖ್ಯತೆ ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡುವ ಜಾಗೃತಿ ಮೂಡಿಸುವುದು. ಯುವ ಕಾಂಗ್ರೆಸ್ ಕಾರ್ಯ ಕರ್ತರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಸ್ಟಿಕ್ಕರ್ ಹಂಚುವ ಮೂಲಕ ಸಂದೇಶವನ್ನು ತಲುಪಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಮುಖ ನಾಯಕರಾದ:
ಅನಿಲ್ ಕುಮಾರ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ (ಧಾರವಾಡ ಗ್ರಾಮಾಂತರ) ಅರ್ಜುನ್ ಪಾಟೀಲ, ಹುಬ್ಬಳ್ಳಿ-ಧಾರವಾಡ ನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ,ಶಾನು ಖಾನ್, ಕೇಂದ್ರ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ

ಶುಜಾಉದ್ದೀನ್ ವಾಚ್‌ಮೇಕರ್, ಪ್ರಧಾನ ಕಾರ್ಯದರ್ಶಿ, ಪ್ರಮ್ ಜಾಧವ್, ವಿಧಾನಸಭಾ ಅಧ್ಯಕ್ಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಈ ಒಂದು  ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮತದಾನದಲ್ಲಿ ಅವ್ಯವಹಾರ ನಡೆಯದಂತೆ ತಡೆಯುವುದು, ಜನರ ಮತದ ಹಕ್ಕನ್ನು ಕಾಪಾಡುವುದು ನಮ್ಮ ಬದ್ಧತೆ” ಎಂದು ಒತ್ತಿ ಹೇಳಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.