ಶಿಕ್ಷಕಿ ಮೇಲೆ ಬೀದಿನಾಯಿಗಳ ದಾಳಿ – ಶಕುಂತಲಾ ಟೀಚರ್ ಬದುಕಿದ್ದೇ ದೊಡ್ಡ ಪವಾಡ…..

Suddi Sante Desk

ಹಾಸನ –

ಶಾಲೆಗೆ ಹೊರಟಿದ್ದ ಶಿಕ್ಷಕಿಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯ ವೀರಾಪೂರದ ಸೀಗೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ವೀರಾಪೂರ ಗ್ರಾಮದ ಶಿಕ್ಷಕಿ ಶಕುಂತಲಾ ಅವರು ಕೆರೆಯ ದಂಡೆಯ ಮೇಲೆ ನಡೆದುಕೊಂಡು ಹೊರಟಿ ದ್ದರು.ಈ ಒಂದು ಸಮಯದಲ್ಲಿ ಏಕಾಎಕಿಯಾಗಿ ದಾಳಿ ಮಾಡಿದ ಬೀದಿ ನಾಯಿಗಳು ಸಿಕ್ಕಾಪಟ್ಟಿ ಕಚ್ಚಿವೆ.

ಮುಖ ಕೈ ಸೇರಿದಂತೆ ಎಲ್ಲೆಂದರಲ್ಲಿ ಬೀದಿ ನಾಯಿಗಳು ಅಟ್ಯಾಕ್ ಮಾಡಿ ಕಚ್ಚಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ ಶಕುಂತಲಾ ಟೀಚರ್. ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಬೀದಿ ನಾಯಿಗಳ ದಂಡು ಇದ್ದಿದ್ದು ಈ ಒಂದು ಘಟನೆ ಯನ್ನು ನೋಡಿದ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಸ್ಥಳಕ್ಕೆ ಹೋಗಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಆದ್ರೂ ಕೂಡಾ ಮುಖ ಕೈ ಸೇರಿದಂತೆ ಎಲ್ಲೇಂದರಲ್ಲಿ ನಾಯಿಗಳು ಕಚ್ಚಿದ್ದು ಸಧ್ಯ ತೀವ್ರವಾಗಿ ಗಾಯಗೊಂ ಡಿರುವ ಇವರನ್ನು ಸಾರ್ವಜನಿಕರು 108 ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮುಖದ‌ ಭಾಗಕ್ಕೆ ಕಚ್ಚಿ ಗಾಯಗೊಳಿಸಿದ್ದು ಗುರುತು ಸಿಗಲಾರದಷ್ಟು ಗಾಯಗಳಾಗಿವೆ. ಬೆಳಿಗ್ಗೆ ಸೀಗೆ ಕೆರೆ ಏರಿ‌ ಮೇಲೆ ನಡೆದುಕೊಂಡು ಹೋಗುವಾಗ ಧಿಡೀರ್ ದಾಳಿ ಮಾಡಿದ‌ ಬೀದಿನಾಯಿಗಳಿಂದ ಈ ಒಂದು ಘಟನೆ ನಡೆದಿದೆ.ಗಾಯಾಳು ಶಿಕ್ಷಕಿಗೆ ಸಧ್ಯ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಈ ಒಂದು ಘಟನೆಯಲ್ಲಿ ಶಿಕ್ಷಕಿ ಶಕುಂತಲಾ ಬದುಕಿದ್ದೆ ದೊಡ್ಡ ಪವಾಡವಾಗಿದ್ದು ಈ ಕುರಿತಂತೆ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು ಬೀದಿನಾಯಿಗಳ ನಿಯಂತ್ರಣವನ್ನು ಮಾಡುವಂತೆ ಒತ್ತಾಯವನ್ನು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.