ವರ್ಗಾವಣೆ,ಸಮಾನ ವೇತನ OTS ಸೇರಿದಂತೆ ಸರ್ಕಾರಿ ನೌಕರರ ಕುರಿತು ಮನವಿ – ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ ಅವರಿಗೆ ಮನವಿ ಸಲ್ಲಿಕೆ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿನ ಸರ್ಕಾರಿ ನೌಕರರ ಸಮಸ್ಯೆ ಮತ್ತು ಶಿಕ್ಷಕರ ಬೇಡಿಕೆಗಳ ಕುರಿತು ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಭೇಟಿಮಾಡಿ ನಮ್ಮ ಸರ್ಕಾರಿ ನೌಕರರಿಗೆ ಕೇಂದ್ರ ಸಮಾನ ವೇತನ ಮಂಜೂರಾತಿ, ನೂತನ ಪಿಂಚಣಿ ಯೋಜನೆ ನಿರ್ಮೂಲನೆ ಸರ್ಕಾರಿ ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಹಾಗೂ ಎಲ್ಲಾ ಇಲಾಖೆಗಳಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ ನಮ್ಮ ತಾಲೂಕಿನ ವತಿಯಿಂದ ನಮ್ಮ ನೆಚ್ಚಿನ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಯಿತು.

ಪ್ರಮುಖ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತಾದ ಈ ಒಂದು ಮನವಿಯನ್ನು ಶಾಸಕರ ಮೂಲಕ ಮುಖ್ಯಮಂತ್ರಿ ಯವರಿಗೆ ಮಾಹಿತಿ ರವಾನಿಸಲು ಕೋರಲಾಯಿತು.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಉಪಾಧ್ಯಕ್ಷರಾದ ಯಶೋಧರ್,ರಾಜ್ಯ ಹಿರಿಯ ಉಪಾಧ್ಯ. ಕ್ಷರು ಶಿವಾನಂದ,ರಮೇಶ್ ಕೆ ಸಿ,ಶಾಸಕರ ಆಪ್ತ ಸಹಾಯ ಕರಾದ ನಿರಂಜನ್,ಮುಂತಾದವರು ಹಾಜರಿದ್ದರು.ಇದೇ ವೇಳೆ ಬೇಡಿಕೆಗಳಿಗೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.