ಹುಬ್ಬಳ್ಳಿ –
ಶಾಂತವಾಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಚಾಕು ಸದ್ದು ಮಾಡಿದೆ.ಹೌದು ಹಳೇ ವೈಷಮ್ಯದ ಹಿನ್ನಲೆಯಲ್ಲಿ ರೌಡಿಶೀಟರ್ ಗೆ ಚಾಕು ಇರಿತವನ್ನು ಮಾಡಲಾಗಿದೆ.ಅಯೋಧ್ಯೆ ನಗರದ ಸುನೀಲ ಕೈರಾಯಿ ಎಂಬುವನಿಗೆ ಚಾಕುವನ್ನು ಇರಿತ ಮಾಡಲಾಗಿದೆ. ಹುಬ್ಬಳ್ಳಿಯ ಈಶ್ವರ ನಗರ ದಲ್ಲಿ ಈ ಒಂದು ಘಟನೆ ನಡೆದಿದೆ.
ನಾಲ್ಕೈದು ಜನರ ಗುಂಪಿನಿಂದ ಚಾಕುವನ್ನು ಇರಿತವನ್ನು ಮಾಡಲಾಗಿದೆ.ಚಾಕು ಇರಿದ ಗುಂಪು ಪರಾರಿಯಾಗಿದ್ದು ಚಾಕು ಇರಿತದಿಂದ ರಸ್ತೆಯ ಲ್ಲಿಯೇ ಕುಸಿದು ಬಿದ್ದಿದ್ದ ಸುನೀಲನ್ನು ಸ್ಥಳೀಯರ ಸಹಾಯದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿ ಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ….