ಕಲಘಟಗಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೆದಾರ – ಖಾತೆ ಬದಲಾವಣೆಗೆ 45 ಸಾವಿರ ಗೆ ಬೇಡಿಕೆ ಇಟ್ಟಿದ್ದ ಸುರೇಶ ಅಡವಿ ಟ್ರ್ಯಾಪ್…..

Suddi Sante Desk
ಕಲಘಟಗಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೆದಾರ – ಖಾತೆ ಬದಲಾವಣೆಗೆ 45 ಸಾವಿರ ಗೆ ಬೇಡಿಕೆ ಇಟ್ಟಿದ್ದ ಸುರೇಶ ಅಡವಿ ಟ್ರ್ಯಾಪ್…..

ಕಲಘಟಗಿ

ಕಲಘಟಗಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೆದಾರ – ಖಾತೆ ಬದಲಾವಣೆಗೆ 45 ಸಾವಿರ ಗೆ ಬೇಡಿಕೆ ಇಟ್ಟಿದ್ದ ಸುರೇಶ ಅಡವಿ ಟ್ರ್ಯಾಪ್

ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿರಸ್ತೆದಾರರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಘಟಗಿಯಲ್ಲಿ ನಡೆದಿದೆ.ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ತಹಶೀಲ್ದಾರ ಕಚೇರಿಯಲ್ಲಿ ಈ ಒಂದು ಟ್ರ್ಯಾಪ್ ಆಗಿದೆ.

ತಹಶೀಲ್ದಾರ ಕಚೇರಿಯ ಶಿರಸ್ತೆದಾರ ಸುರೇಶ ಅಡವಿ ಲೋಕಾಯುಕ್ತ ಬಲೆಗೆ ಬಿದ್ದವರಾದವ ರಾಗಿದ್ದಾರೆ.ವ್ಯಕ್ತಿಯೊಬ್ಬರ ಖಾತೆಯನ್ನು ಬದಲಾ ವಣೆ ಮಾಡುವ ವಿಚಾರ ಕುರಿತಂತೆ 50 ಸಾವಿರ ರೂಪಾಯಿಗೆ ಬೇಡಿಕೆಯನ್ನು ಇಟ್ಟಿದ್ದರು.ಹೀಗಾಗಿ ಈ ಕುರಿತಂತೆ ಲೋಕಾಯುಕ್ತರಿಗೆ ದೂರನ್ನು ನೀಡಿದ್ದರು.ದೂರಿನ ಹಿನ್ನಲೆಯಲ್ಲಿ ಇತ್ತ ಕಚೇರಿ ಯಲ್ಲಿ ಹಣವನ್ನು ತಗೆದುಕೊಳ್ಳುವಾಗ ಸುರೇಶ ಅಡಿವಿ ಲೋಕಾಯುಕ್ತ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಎಸ್ಪಿ ಶಂಕರ ರಾಗಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಮತ್ತು ಟೀಮ್ ನವರು ಈ ಒಂದು ಕಾರ್ಯಾಚರಣೆಯನ್ನು ಮಾಡಿದ್ದಾರೆ.ಸಧ್ಯ ಟ್ರಾಪ್ ಆಗಿರುವ ಸುರೇಶ್ ಅಡಿವಿ ಯನ್ನು ವಶಕ್ಕೆ ತಗೆದುಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.ಇನ್ನೂ ಈ ಒಂದು ಕಾರ್ಯಾ ಚರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ಬಸಗೌಡ ಚ ಪಾಟೀಲ್, ಪ್ರಭುಲಿಂಗಯ್ಯ ಹಿರೇಮಠ, ಟಿ.ಎ ಸೊಪ್ಪಿ, ವಿ.ಎಸ್. ದೇಸಾಯಿ ಗೌಡ್ರ, ಎಸ್.ಇ.ಲಕ್ಕಮ್ಮನವರ,ಎಮ್ ಎಮ್ ಶಿವನಾಯ್ಕ‌ರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.