ಕೋಲಾರ –
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆ ಯೊಬ್ಬರನ್ನು ಅಮಾನತು ಮಾಡಿರುವ ಘಟನೆ ಕೋಲಾರ ದಲ್ಲಿ ನಡೆದಿದೆ.ಹೌದುಅಂದರ್ ಬಾಹರ್ ಜೂಜಿನಲ್ಲಿ ನಿರತರಾಗಿದ್ದವರಿಗೆ ಪೋಲೀಸರ ದಾಳಿ ಬಗ್ಗೆ ಮಾಹಿತಿ ಸೋರಿಕೆ ಮಾಡಿ ಕರ್ತವ್ಯ ಲೋಪ ಎಸಗಿದಕ್ಕಾಗಿ ಅಮಾನತು ಮಾಡಲಾಗಿದೆ
ಶ್ರೀನಿವಾಸಪುರ ಪೋಲೀಸ್ ಠಾಣೆಯ ಗುಪ್ತ ಮಾಹಿತಿಯನ್ನು ಪೋಲೀಸ್ ಪೇದೆ ಎಸ್.ಬಿ ಶ್ರೀನಾಥ್ ಹಂಚಿಕೊಂಡಿದ್ದರಂತೆ ಹೀಗಾಗಿ ಇವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿ ಆದೇಶವನ್ನು ಮಾಡಿದ್ದಾರೆ ಶ್ರೀನಿವಾಸಪುರ ತಾಲ್ಲೂಕಿನ ಪೋಲಿಸ್ ಠಾಣೆ ವ್ಯಾಪಿಗೆ ಬರುವ ಆಲಂಗಿರಿ ಗ್ರಾಮದಲ್ಲಿ ಗುಂಪು ಇಸ್ಪೇಟ್ ಅಟದಲ್ಲಿ ನಿರತವಾಗಿತ್ತು.
ಪೋಲೀಸರು ಗುಂಪಿನ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದರು ಆದರೆ ದಾಳಿಯ ಬಗ್ಗೆ ಪೇದೆ ಶ್ರೀನಾಥ್ ಮಾಹಿತಿ ಸೋರಿಕೆ ಮಾಡಿದ್ದರು. ಜಬಾಬ್ದಾರಿ ಇರುವ ಕರ್ತವ್ಯದಲ್ಲಿ ಲೋಪ ಮಾಡಿದ್ದಾರೆ ಎಂಬ ಮಾಹಿತಿ ಮೇರೆಗೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ಅವರು ಎಸ್.ಬಿ ಶ್ರೀನಾಥ್ ರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಕೋಲಾರ…..