ಮಣ್ಣಿನಲ್ಲೂ ಬಿಡದ ಲಂಚದ ದಾಹ ಲೋಕಾಯುಕ್ತ ಬಲೆಗೆ ತಹಶೀಲ್ದಾರ – 50 ಸಾವಿರ ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್ ಆದ ತಹಶೀಲ್ದಾರ…..

Suddi Sante Desk
ಮಣ್ಣಿನಲ್ಲೂ ಬಿಡದ ಲಂಚದ ದಾಹ ಲೋಕಾಯುಕ್ತ ಬಲೆಗೆ ತಹಶೀಲ್ದಾರ – 50 ಸಾವಿರ ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್ ಆದ ತಹಶೀಲ್ದಾರ…..

ಕೊಪ್ಪಳ

ಮಣ್ಣಿನಲ್ಲೂ ಬಿಡದ ಲಂಚದ ದಾಹ ಲೋಕಾ ಯುಕ್ತ ಬಲೆಗೆ ತಹಶೀಲ್ದಾರ – 50 ಸಾವಿರ ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್ ಆದ ತಹಶೀಲ್ದಾರ ಹೌದು

ಲೋಕಾಯುಕ್ತ ಬಲೆಗೆ ತಹಶೀಲ್ದಾರರೊಬ್ಬರು ಬಿದ್ದ ಘಟನೆ ಕೊಪ್ಪಳ ದಲ್ಲಿ ನಡೆದಿದೆ.ಖಾಸಗಿ ವ್ಯಕ್ತಿಯಿಂದ ಹಣ ಬೇಡಿಕೆ ಇಟ್ಟಿದ್ದ ತಹಶಿಲ್ದಾರ್ ಮಂಜುನಾಥ ಹಿರೇಮಠ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.ಅಕ್ರಮ ಮರುಳು (ಕೆಂಪು ಮಣ್ಣು)ಸಾಗಾಣಿಕೆಗೆ ಲಂಚದ ಬೇಡಿಕೆ ಇಟ್ಟಿದ್ದ ತಹಶಿಲ್ದಾರ್.ಕೊಪ್ಪಳ ಜಿಲ್ಲೆಯ ಗಂಗಾವತಿ ತಹಶಿಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.

ತಹಶೀಲ್ದಾರ್ ಮಂಜುನಾಥ ಹಿರೇಮಠ ರಾಜು ಎಂಬುವರಿಂದ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದರು ಲೋಕಯುಕ್ತಾ ಡಿವೈಎಸ್ಪಿ ಸಲೀಂಪಾಷ ನೇತೃತ್ವ ದಲ್ಲಿ ಈ ಒಂದು ದಾಳಿಯಾಗಿದೆ.ಮೊದಲು 1 ಲಕ್ಷ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದರು ತಹಶೀಲ್ದಾರ್ 50 ಸಾವಿರ ಹಣ ಪಡೆಯುವಾಗ ಲೋಕಾ ಯುಕ್ತ ದಾಳಿ ಮಾಡಿ ಟ್ರ್ಯಾಪ್ ಮಾಡಲಾಗಿದೆ.

ಸಧ್ಯ ತಹಶೀಲ್ದಾರ ರನ್ನು ವಶಕ್ಕೆ ತಗೆದುಕೊಂಡಿ ರುವ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.