ಹುಬ್ಬಳ್ಳಿಯಲ್ಲಿನ ಅಕ್ರಮ ಅಕ್ಕಿ ದಂಧೆಯನ್ನು ಒಮ್ಮೆ ನೋಡಿ CM ಸಾಹೇಬ್ರೆ – ಎರಡು ದಿನ ಧಾರವಾಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿಯವರ ಗಮನಕ್ಕೆ ಅಕ್ಕಮ ಅಕ್ಕಿ ದಂಧೆಯ ಒಂದಿಷ್ಟು ಮಾಹಿತಿ…..

Suddi Sante Desk
ಹುಬ್ಬಳ್ಳಿಯಲ್ಲಿನ ಅಕ್ರಮ ಅಕ್ಕಿ ದಂಧೆಯನ್ನು ಒಮ್ಮೆ ನೋಡಿ CM ಸಾಹೇಬ್ರೆ – ಎರಡು ದಿನ ಧಾರವಾಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿಯವರ ಗಮನಕ್ಕೆ ಅಕ್ಕಮ ಅಕ್ಕಿ ದಂಧೆಯ ಒಂದಿಷ್ಟು ಮಾಹಿತಿ…..

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿನ ಅಕ್ರಮ ಅಕ್ಕಿ ದಂಧೆಯನ್ನು ಒಮ್ಮೆ ನೋಡಿ CM ಸಾಹೇಬ್ರೆ – ಎರಡು ದಿನ ಧಾರವಾಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿಯವರ ಗಮನಕ್ಕೆ ಅಕ್ಕಮ ಅಕ್ಕಿ ದಂಧೆಯ ಒಂದಿಷ್ಟು ಮಾಹಿತಿ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅನ್ನಭಾಗ್ಯದ ಅಕ್ಕಿಯ ಅಕ್ರಮ ಅಕ್ಕಿ ದಂಧೆ ಜೋರಾಗಿದೆ. ನಗರದ ತುಂಬೆಲ್ಲಾ ಈ ಒಂದು ಅನ್ನಭಾಗ್ಯ ಅಕ್ಕಿಯ ಅಕ್ರಮದ ಜಾಲ ಬೀಸಿದೆ.ಈ ಒಂದು ದಂಧೆಯಲ್ಲಿ ಕಿಂಗ್ ಪಿನ್ ಯಾರು ಮಾಸ್ಟರ್ ಮೈಂಡ್ ಯಾರು ಹೀಗೆ ಎಲ್ಲಾ ಇಂಚಿಂಚೂ ಮಾಹಿತಿ ಪೊಲೀಸ್ ಇಲಾಖೆಗೆ ಆಹಾರ ಇಲಾಖೆಯವರಿಗೆ ಗೊತ್ತಿದೆ

ಆದ್ರೂ ಕೂಡಾ ಕಂಡು ಕಾಣದಂತೆ ಕೇಳಿ ಕೇಳಲಾರದಂತೆ ಇದ್ದಾರೆ.ಹೀಗಾಗಿ ಈ ಒಂದು ಜಾಲ ಹುಬ್ಬಳ್ಳಿ ಕೇಂದ್ರ ಬಿಂದುವಾದರೆ ಹುಬ್ಬಳ್ಳಿ ಸೇರಿದಂತೆ ಧಾರವಾಡ ಹಾಗೂ ಸುತ್ತ ಮುತ್ತಲಿನ ಏರಿಯಾಗಳಿಗೂ ಪಸರಿಸಿದ್ದು ಇನ್ನೂ ಕೂಡಾ ಹೆಚ್ಚಾಗುತ್ತಿದೆ.ಯಾರೇ ಈ ಒಂದು ವಿಚಾರ ಕುರಿತಂತೆ ಮಾತನಾಡಿದರೆ ಅವರಿಗೆ ಒಂದಿಷ್ಟು ಪ್ರಸಾದವನ್ನು ನೀಡಿ ಅವರನ್ನು ಅವರ ಧ್ವನಿ ಯನ್ನು ಹತ್ತಿಕ್ಕುತ್ತಿರುವ ಡಾನ್ ಗೆ ಕಡಿವಾಣ ಹಾಕುವವರು ಯಾರು ಇಲ್ಲದಂತಾಗಿದೆ.

ಒಂದು ಕಡೆ ರಾಜ್ಯ ಸರ್ಕಾರ ತಾನು ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಲ್ಲಿ ಜನತೆಗೆ ಅನ್ನಭಾಗ್ಯ ಅಕ್ಕಿ ವಿತರಣೆ ಯೋಜನೆ ಕೂಡಾ ಒಂದಾಗಿದ್ದು ಈ ಒಂದು ಯೋಜನೆಯಲ್ಲಿ ಅಕ್ಕಿಯನ್ನು ವಿತರಣೆ ಮಾಡಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದ್ದರೆ ಇನ್ನೂ ಇತ್ತ ಯಾರ ಭಯವಿಲ್ಲದೇ ಯಾವುದೇ ಮುಲಾಜಿಲ್ಲದೇ ಈ ಒಂದು ಅಕ್ಕಿಯನ್ನು ಅಕ್ರಮವಾಗಿ ತುಂಬಿಸುವ ಕಾರ್ಯ ನಗರದಲ್ಲಿ ಕಿಂಗ್ ಪಿನ್ ಟೀಮ್ ನಿಂದ ಜೋರಾಗಿದೆ.

ಕಿಂಗ್ ಪಿನ್ ಡಾನ್ ನ ಈ ಒಂದು ಅಕ್ರಮದ ಕರಾಳತೆ ಗೊತ್ತಿದ್ದರೂ ಕೂಡಾ ಮೌನವಾಗಿರುವ ಮುಖ್ಯಮಂತ್ರಿ ಯವರೇ ಒಮ್ಮೇ ನೋಡಿ.ನಿಮ್ಮ ನೇತ್ರತ್ವದಲ್ಲಿನ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಅನ್ನಭಾಗ್ಯದ ಅಕ್ಕಿಯನ್ನು ನೀಡಲು ಪರದಾಡುತ್ತಿ ದ್ದು ಇನ್ನೂ ಇತ್ತ ಡಾನ್ ಹೇಗೆಲ್ಲಾ ಅಕ್ರಮವಾಗಿ ಈ ಒಂದು ಅದೇ ಅಕ್ಕಿಯನ್ನು ಖರೀದಿಸುತ್ತಾ ಮೆರೆಯುತ್ತಿದ್ದಾರೆ

ಎಂಬೊದನ್ನು ಒಮ್ಮೆ ನೋಡಿ.ಗೊತ್ತಿದ್ದು ಗೊತ್ತಿಲ್ಲದಂತೆ ಇರುವ ನಗರದಲ್ಲಿನ ಅಧಿಕಾರಿ ಗಳಿಗೆ ಕ್ಲಾಸ್ ತಗೆದುಕೊಳ್ಳಿ ಡಾನ್ ಅಕ್ರಮಕ್ಕೆ ಕಡಿವಾಣ ಹಾಕಿ ಒಂದಿಷ್ಟು ಒಳ್ಳೇಯ ಕೆಲಸಕ್ಕೆ ಹೆಸರಾಗಿರುವ ಅಧಿಕಾರಿಗಳೊಂದಿಗೆ ಸಾಥ್ ನೀಡಿ

ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ವನ್ನು ಕೈಗೊಳ್ಳಲಿರುವ ಮುಖ್ಯಮಂತ್ರಿಯವರೇ ಈ ಒಂದು ವಿಚಾರವನ್ನು ಗಂಭೀರವಾಗಿ ತಗೆದು ಕೊಂಡು ಪರಿಶೀಲನೆ ಮಾಡಿ ಅಕ್ರಮಕ್ಕೆ ಬಿಸಿ ಮುಟ್ಟಿಸಿ ಸಂತೋಷದ ಸುದ್ದಿಯಲ್ಲಿರುವ ಜನತೆಯ ಪರವಾಗಿ ಸುದ್ದಿ ಸಂತೆಯ ಆಶಯ ವಾಗಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.