ಪಾಠ ಮಾಡುತ್ತಿರುವಾಗಲೇ ಶಿಕ್ಷಕ ನಿಧನ – ಮಕ್ಕಳ ಎದುರು ಪ್ರಾಣ ಬಿಟ್ಟ ರಾಜೇಶ್ ಸರ್…..

Suddi Sante Desk

ಮಂಡ್ಯ –

ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವಾಗಲೇ ಶಿಕ್ಷಕರೊಬ್ಬರು ಹೃದಯಾಘತಕ್ಕೀಡಾಗಿ ಮೃತಪಟ್ಟ ಘಟನೆ ಮಂಡ್ಯದಲ್ಲಿ ನಡೆದಿದೆ.ಎಲೆಚಾಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ರಾಜೇಶ್(47) ಮೃತರಾಗಿದ್ದಾರೆ.ತರಗತಿಯಲ್ಲಿ ಮಕ್ಕಳಿಗೆ ಎಂದಿನಂತೆ ಪಾಠ ಮಾಡುತ್ತಿದ್ದರು.ಈ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಯದೇವ ಆಸ್ಪತ್ರೆಗೆ ಕೆರೆದೊಯ್ಯ ಲಾಯಿತ್ತಾದರೂ ಬದುಕುಲಿಲ್ಲ ಆಸ್ಪತ್ರೆಯಲ್ಲೇ ಕೊನೆ ಯುಸಿರೆಳೆದರು.

ಶಿಕ್ಷಕ ರಾಜೇಶ್ ಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.ಮೃತರ ಅಂತ್ಯಸಂಸ್ಕಾರ ಕನಕಪುರ ತಾಲೂಕು ದೊಡ್ಡಾಲಹಳ್ಳಿ ಯಲ್ಲಿ ನೆರವೇರಿತು.ಅತ್ತ ಶಾಲೆಯಲ್ಲಿ ಶಿಕ್ಷಕರ ಸಾವಿನ ಸುದ್ದಿ ಕೇಳಿ ಮಕ್ಕಳು ಆಘಾತಕ್ಕೀಡಾಗಿದ್ದಾರೆ.ಗ್ರಾಮಸ್ಥರೂ ನೊಂದುಕೊಂಡಿದ್ದಾರೆ.ಮೃತ ರಾಜೇಶ್ ಅವರಿಗೆ ಜಿಲ್ಲೆಯ ಶಾಲೆಯ ರಾಜ್ಯದ ಮೂಲೆ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.