This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State Newsಕೊಡಗು

ವಿದ್ಯುತ್ ಅವಘಡ ಕ್ಕೆ ಶಿಕ್ಷಕ ಸಾವು ಶಿಕ್ಷಕ ಗಿರೀಶ್ ನ ಸಾವಿನಿಂದ ಅನಾಥವಾಯಿತು ಕುಟುಂಬ

WhatsApp Group Join Now
Telegram Group Join Now

ಕೊಡಗು

ವಿದ್ಯುತ್​ ಅವಘಡದಿಂದ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆ ಕೊಡಗಿನಲ್ಲಿ ನಡೆದಿದೆ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ ಬಡಿದಂತಾಗಿದೆ.ಹಬ್ಬದ ಹಿನ್ನೆಲೆ ಮನೆಗೆ ವಿದ್ಯುತ್ ದೀಪ ಅಳವಡಿಸುವಾಗ ವಿದ್ಯುತ್​ ಅವಘಡ ಸಂಭವಿಸಿದ್ದು

ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೃತಪಟ್ಟ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಹೊಸಬೀದಿ ನಿವಾಸಿ ಎಚ್.ಎಂ.ಗಿರೀಶ್(35) ಮೃತರಾದವರಾಗಿದ್ದಾರೆ ಶಿಕ್ಷಕ ಗಿರೀಶ್ ಚಿಕ್ಲಿಹೊ ಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಹೆಬ್ಬಾಲೆಯ ಬನಶಂಕರಿ ಅಮ್ಮನವರ ಹಬ್ಬ ನಡೆ ಯುತ್ತಿದ್ದ ಹಿನ್ನೆಲೆ ಗಿರೀಶ್​ ಮನೆಗೆ ವಿದ್ಯುತ್ ದೀಪ ಅಳವಡಿಸುತ್ತಿದ್ದರು.ಈ ವೇಳೆ ವಿದ್ಯುತ್​ ಪ್ರವಹಿಸಿ ಶಿಕ್ಷಕ ಅಸುನೀಗಿದ್ದಾರೆ.ಹಬ್ಬದ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಸುದ್ದಿ ಸಂತೆ ನ್ಯೂಸ್…..


Google News

 

 

WhatsApp Group Join Now
Telegram Group Join Now
Suddi Sante Desk