ವಿದ್ಯುತ್ ಅವಘಡ ಕ್ಕೆ ಶಿಕ್ಷಕ ಸಾವು ಶಿಕ್ಷಕ ಗಿರೀಶ್ ನ ಸಾವಿನಿಂದ ಅನಾಥವಾಯಿತು ಕುಟುಂಬ

Suddi Sante Desk
ವಿದ್ಯುತ್ ಅವಘಡ ಕ್ಕೆ ಶಿಕ್ಷಕ ಸಾವು ಶಿಕ್ಷಕ ಗಿರೀಶ್ ನ ಸಾವಿನಿಂದ ಅನಾಥವಾಯಿತು ಕುಟುಂಬ

ಕೊಡಗು

ವಿದ್ಯುತ್​ ಅವಘಡದಿಂದ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆ ಕೊಡಗಿನಲ್ಲಿ ನಡೆದಿದೆ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ ಬಡಿದಂತಾಗಿದೆ.ಹಬ್ಬದ ಹಿನ್ನೆಲೆ ಮನೆಗೆ ವಿದ್ಯುತ್ ದೀಪ ಅಳವಡಿಸುವಾಗ ವಿದ್ಯುತ್​ ಅವಘಡ ಸಂಭವಿಸಿದ್ದು

ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೃತಪಟ್ಟ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಹೊಸಬೀದಿ ನಿವಾಸಿ ಎಚ್.ಎಂ.ಗಿರೀಶ್(35) ಮೃತರಾದವರಾಗಿದ್ದಾರೆ ಶಿಕ್ಷಕ ಗಿರೀಶ್ ಚಿಕ್ಲಿಹೊ ಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಹೆಬ್ಬಾಲೆಯ ಬನಶಂಕರಿ ಅಮ್ಮನವರ ಹಬ್ಬ ನಡೆ ಯುತ್ತಿದ್ದ ಹಿನ್ನೆಲೆ ಗಿರೀಶ್​ ಮನೆಗೆ ವಿದ್ಯುತ್ ದೀಪ ಅಳವಡಿಸುತ್ತಿದ್ದರು.ಈ ವೇಳೆ ವಿದ್ಯುತ್​ ಪ್ರವಹಿಸಿ ಶಿಕ್ಷಕ ಅಸುನೀಗಿದ್ದಾರೆ.ಹಬ್ಬದ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.