ವರ್ಗಾವಣೆ ಅವಧಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆ – ಸಮಸ್ತ ಸರ್ಕಾರಿ ನೌಕರರ ಪರವಾಗಿ ಶಿಕ್ಷಕ ರಂಗಸ್ವಾಮಿ ಒತ್ತಾಯ…..

Suddi Sante Desk
ವರ್ಗಾವಣೆ ಅವಧಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆ – ಸಮಸ್ತ ಸರ್ಕಾರಿ ನೌಕರರ ಪರವಾಗಿ ಶಿಕ್ಷಕ ರಂಗಸ್ವಾಮಿ ಒತ್ತಾಯ…..

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಅವಧಿ ಮುಕ್ತಾಯಗೊಂಡಿದ್ದು ಪ್ರತಿ ವರ್ಷದಂತೆ ಈ ಒಂದು ಅವಧಿಯನ್ನು ವಿಸ್ತರಣೆ ಮಾಡುವಂತೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಶಿಕ್ಷಕ ರಂಗಸ್ವಾಮಿ ಒತ್ತಾಯಿಸಿದ್ದಾರೆ‌. ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಸಿ. ಎಸ್.ಷಡಕ್ಷರಿ ರವರಲ್ಲಿ ಹಾಗೂ ಸಮಸ್ತ ಪದಾಧಿಕಾರಿರವರಲ್ಲಿ ಈ ಮೂಲಕ ಆಗ್ರಹಿಸಿದ್ದಾರೆ

ಸಮಸ್ತ ಕರ್ನಾಟಕರಾಜ್ಯ ಸರ್ಕಾರಿ ನೌಕರರ ವೃಂದದವರ ಪರವಾಗಿ ವಿನಂತಿಸಿಕೊಳ್ಳುವುದೇ ನೆಂದರೆ 2025.2026.ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆ ಅವದಿಯು ದಿನಾಂಕ 14.06. 2025 ರಂದು ಸರ್ಕಾರ ದ ಸುತ್ತೋಲೆಯದ ಪ್ರಕಾರ ಮುಕ್ತಾಯವಾಗಿರುತ್ತದೆ ಪ್ರಸ್ತುತ ಮುಕ್ತಾಯವಾಗಿರುವ ವರ್ಗಾವಣೆಯು ಇತ್ತೀಚಿನ ಸರ್ಕಾರದ ಅಧಿಕೃತದ ವಿದ್ಯಾಮಾನದ ಪ್ರಕಾರ ಶೇಕಡ 24% ಮಾತ್ರ ವರ್ಗಾವಣೆ ಯಾಗಿರುತ್ತದೆ

ಆದ್ದರಿಂದ ಸರ್ಕಾರ ನಿಗದಿ ಪಡಿಸಿರುವ ಶೇಕಡ ಪ್ರಮಾಣ ಮುಕ್ತಾಯವಾಗದೆ ಇರುವ ಪ್ರಯಕ್ತ ಹಾಗೂ ಸಮಸ್ತ ಸರ್ಕಾರಿ ನೌಕರರ ಆರೋಗ್ಯದ ಹಿತ ದೃಷ್ಟಿ  ಯಿಂದ ಮತ್ತು ಕುಟುಂಬದ ಕೌಟಿಂಬಿಕ ಹಿತ ದೃಷ್ಟಿ ಯಿಂದ ಹಾಗೂ ಸರ್ಕಾರಿ ನೌಕರವರ ಕುಟುಂಬ ಸದಸ್ಯರ ಆರೋಗ್ಯದ ಹಿತ ದೃಷ್ಠಿಯಿಂದ ಪ್ರಸ್ತುತ ಮುಕ್ತಾಯವಾಗಿರುವ ವಿವಿಧ ಇಲಾಖೆ ಸಮಸ್ತ ನೌಕರರ ವೃಂದದವರ ಹಾಗೂ ಸಮಸ್ತ ಅಧಿಕಾರಿ ವೃಂದ ದವರ ಹಿತ ದೃಷ್ಟಿಯಿಂದ

ಹಾಗೂ ಸಮಸ್ತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹಿತ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ನೌಕರರ ಹಿತ ದೃಷ್ಟಿಯಿಂದ ಪ್ರಸ್ತುತ ಸರ್ಕಾರಿ ನೌಕರರ ವರ್ಗಾವಣೆ ಯ ಅವಧಿ ಯನ್ನು ಪ್ರತಿ ಶೈಕ್ಷಣಿಕ ವರ್ಷದಂತೆ ಈ ಬಾರಿಯೂ ಸಹ ತಾವು ಈಗಾಗಲೇ ಮುಕ್ತಾಯವಾಗಿ ರುವ ಅವಧಿ ಯನ್ನು ತಕ್ಷಣ ತಾವು ಮುಖ್ಯ ಮಂತ್ರಿ ರವರಿಗೆ ಹಾಗೂ ಉಪ ಮುಖ್ಯ ಮಂತ್ರಿ ರವರಾದ ಡಿ. ಕೆ. ಶಿವ ಕುಮಾರ್ ರವರಿಗೆ ಹಾಗೂ ಎಲ್ಲಾ ಇಲಾಖೆಯ ಸಚಿವರಿಗೆ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಯ ಮಾನ್ಯ ಅಧಿಕಾರಿ ವೃಂದದವರಿಗೆ ಪತ್ರ ಬರೆಯುವುದರ ಮುಖಾಂತರ

ತಾವು ಕರ್ನಾಟಕ ರಾಜ್ಯ ಸರ್ಕಾರಿ ನೌಕರವೃಂದದ ಎಲ್ಲಾ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿ ವೃಂದದವರ ಹಿತ ದೃಷ್ಟಿಯಿಂದ ಕರ್ನಾಟಕ ಸರ್ಕಾರಿ ನೌಕರವರ ಪರವಾಗಿ ಪತ್ರ ಬರೆದು ಅನುಕೂಲ ವನ್ನು ಕಲ್ಪಿಸಿ ಕೊಡಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಶಿಕ್ಷಕ ರಂಗಸ್ವಾಮಿ ಆಗ್ರಹ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.