ಶಿಕ್ಷಕ ಮಾನತು – ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಅಮಾನತು ಆದೇಶ…..

Suddi Sante Desk
ಶಿಕ್ಷಕ ಮಾನತು – ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಅಮಾನತು ಆದೇಶ…..

ಬೀದರ್‌

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಹ ಶಿಕ್ಷಕ ರೊಬ್ಬರನ್ನು ಅಮಾನತು ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದ ಬಸವಕಲ್ಯಾಣ ತಾಲ್ಲೂಕಿನ ಕಾಂಬಳೆವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಅಶೋಕ ರೆಡ್ಡಿ ಹುಡೆ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಷಾ ಅಮಾನತು ಮಾಡಿದ್ದಾರೆ

ಅಶೋಕ ರೆಡ್ಡಿ ಅವರು ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾ ಗ್ರಾಮದ ಕರ್ನಾಟಕ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯ ನೋಡಲ್‌ ಅಧಿಕಾರಿ ಕೂಡ ಆಗಿದ್ದಾರೆ.ವಸತಿ ಶಾಲೆಯ ಮೇಲ್ವಿಚಾರಕಿ ಸುನೀತಾರಾಜಕುಮಾರ ನಾರಾಯಣಪೇಟಕರ ಅವರಿಗೆ ಲೈಂಗಿಕ ಕಿರು ಕುಳ ಕೊಟ್ಟಿದ್ದಾರೆ ಎಂಬ ದೂರು ಆಧರಿಸಿ ಜುಲೈ 27ರಂದು ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಅಧಿಕಾರಿಗಳನ್ನು ಶಾಲೆಗೆ ಕಳುಹಿಸಿ ವರದಿ ಪಡೆಯಲಾಗಿದೆ.

ಅಶೋಕ ರೆಡ್ಡಿ ಅವರು ಕರ್ತವ್ಯಲೋಪ ದುರ್ನಡತೆಯಿಂದ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅವರ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ನಡತೆ)ನಿಯಮಾವಳಿ 2021ರ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಸಲೀಂ ಪಾಷಾ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೀದರ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.