ಶಿಕ್ಷಕರ ಪ್ರತಿಭಟನೆ – ಜಿಲ್ಲಾಧಿಕಾರಿ ಗೆ ಮನವಿ ‌ನೀಡಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ ಶಿಕ್ಷಕರು

Suddi Sante Desk

ವಿಜಯಪುರ –

ಬಿಎಲ್‌ಒ ಹಾಗೂ ಚೆಕ್‌ಪೋಸ್ಟ್‌ ಗಡಿಯಲ್ಲಿ ಕಾರ್ಯನಿರ್ವ ಹಿಸಿದ ಶಿಕ್ಷಕರುಗಳಿಗೆ ಗಳಿಕೆ ರಜೆ ಮಂಜೂರು ಮಾಡಲು ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತಿಕೋಟಾ,ಬಬಲೇಶ್ವರ ಹಾಗೂ ವಿಜಯಪುರ ಗ್ರಾಮೀಣ ವಲಯದ ಶಿಕ್ಷಕ ಸಂಘ ಹಾಗೂ ನೌಕರ ಸಂಘ ದ ಪದಾ ಧಿಕಾರಿಗಳು ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಿ ದರು.ಬಬಲೇಶ್ವರ,ವಿಜಯಪುರ ನಗರ,ನಾಗಠಾಣ ಮತ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯ ವ್ಯಾಪ್ತಿಯಲ್ಲಿ ಶಿಕ್ಷಕರು ಭೂತ್‌ ಮಟ್ಟದ(ಬಿಎಲ್‌ಒ)ಅಧಿಕಾರಿಗಳಾಗಿ ವರ್ಷದ 365 ದಿನಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ.ಇದಕ್ಕಾಗಿ ಶಿಕ್ಷಕರು ರಜಾ ರಹಿತ ನೌಕರರೆಂದು ಪರಿಗಣಿಸಿ ಅವರಿಗೆ ವಾರ್ಷಿಕವಾಗಿ 30 ಗಳಿಕೆ ರಜೆ ಮಂಜೂರು ಮಾಡಬೇಕು ಇದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಗಳಿಕೆ ರಜೆ ಮಂಜೂರಾತಿಗೆ ಕ್ರಮ ವಹಿಸಬೇಕು ಎಂದು ಪದಾಧಿಕಾರಿಗಳು ಮನವಿ ಮಾಡಿಕೊಂಡರು.

ಇನ್ನೂ ಈ ಒಂದು ಪ್ರತಿಭಟನೆ ಯಲ್ಲಿ ಉಜ್ವಲ ಬನಸೋ ಡೆ, ವಿ.ಬಿ.ದಿವಾನಜಿ,ಎಂ.ಎ.ಬಿಸನಾಳ,ಪಿ.ಕೆ.ಪ್ರಭಾಕರ, ಅಲ್ಲಾಭಕ್ಷ ವಾಲೀಕಾರ,ಅರ್ಜುನ ಲಮಾಣಿ, ಹನುಮಂತ ಕೊಣದಿ,ಸಿ.ಟಿ. ಜತ್ತಿ,ಅಶೋಕ ಚನಬಸಗೋಳ,ಎ.ಬಿ. ದಡಕೆ,ಅಶೋಕ ಬೂದಿಹಾಳ,ಆರ್‌.ಎಂ.ಮೇತ್ರಿ, ಝಡ್‌. ಐ. ಇಂಡಿಕಾರ, ಬಿ.ಎಸ್‌. ಮಠ, ಅಶೋಕ ಭಜಂತ್ರಿ, ಆರ್‌.ಎಸ್‌. ದಿಕ್ಷಿತ್‌, ಎಸ್‌.ಬಿ. ಮಡಸನಾಳ, ಎಲ್‌. ಎಂ. ಬಡಿಗೇರ, ಸಿದರಾಯ ಅಥಣಿ, ವಿ.ಎಸ್‌. ಕಳಸಗೊಂಡ, ವೆಂಕಟೇಶ ಕಪಟಕರ, ಆರ್‌.ಎಸ್‌. ಮಸಳಿ, ಆರದ ಜಾಧವ, ಎಸ್‌.ಕೆ. ದೇಶಪಾಂಡೆ, ಎಂ.ಐ. ಕುಡಚಿ, ಐ.ಬಿ. ಅಡಳ್ಳಿ, ಎಸ್‌.ಬಿ. ಕೊಪ್ಪದ, ಎಂ.ಎಸ್‌. ಟಕ್ಕಳಕಿ, ಎನ್‌.ಜಿ. ತೆಗ್ಗಿನಮನಿ, ಪಿ.ಜೆ. ಇನಾಂದಾರ, ಎನ್‌.ಎಚ್‌. ಮುಜಾ ವರ, ಎಸ್‌.ಎನ್‌. ಬಾಗಲಕೋಟ, ಪರಸಪ್ಪ ಮಾದರ, ಎಚ್‌. ಎಂ. ಮುಲ್ಲಾ, ಬಿ.ವೈ. ಮೇಡೆಗಾರ, ಎಸ್‌.ಎಸ್‌. ಬಬಲೇಶ್ವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.