ಶಿಕ್ಷಕರು ಪರೀಕ್ಷೆ ಎದುರಿಸುವ ಧೈರ್ಯವನ್ನು ಮಾಡಬೇಕೆಂದರು ಶಿಕ್ಣಣ ಸಚಿವರು – ಪರೀಕ್ಷೆ ಬರೆಯದೇ ಬಡ್ತಿ ಪಡೆಯುವಂತೆ ಮಾಡೊದು ತಪ್ಪಾಗುತ್ತದೆಯಂತೆ

Suddi Sante Desk

ಶಿವಮೊಗ್ಗ –

ಶಿಕ್ಷಕರು ನೂನತ ಸಿ ಆಂಡ್ ಆರ್ ನಿಯಮದ ಪ್ರಕಾರ ಬಡ್ತಿಗೆ ಪರೀಕ್ಷೆ ಎದುರಿಸೊದು ಅನಿವಾರ್ಯ ಎಂದು ಪ್ರಾಥಮಿಕ ಮತ್ತು ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು. ಶಿವಮೊಗ್ಗ ದಲ್ಲಿ ಮಾತನಾಡಿದ ಅವರು ಶಿಕ್ಷಕರು ಪರೀಕ್ಷೆಯನ್ನು ಎದುರಿಸುವ ಧೈರ್ಯ ವನ್ನು ಮಾಡಬೇಕು ಈ ಒಂದು ವಿಚಾರದಲ್ಲಿ ಇಲಾಖೆ ಯೊಂದಿಗೆ ರಾಜ್ಯದ ಶಿಕ್ಷಕರು ಸಹಕಾರವನ್ನು ನೀಡಬೇಕು ಎಂದರು.

ಇನ್ನೂ ಈ ಒಂದು ಶಿಕ್ಷಣ ಇಲಾಖೆ ಬೇರೆ ಇಲಾಖೆಯಂತೆ ಅಲ್ಲ ಶಿಕ್ಷಕರು ಪರೀಕ್ಷೆ ಬರೆಯದೇ ಬಡ್ತಿ ಪಡೆಯುವಂತೆ ಮಾಡೊದು ತಪ್ಪಾಗುತ್ತದೆ ಇನ್ನೂ 1 ರಿಂದ 8ನೇ ತರಗತಿ ಯವರೆಗೆ ಪಾಠ ಮಾಡಲು ಅವಕಾಶ ಕೇಳುತ್ತಿದ್ದೀರಿ ನೀವು ಪರೀಕ್ಷೆ ಬೇಡ ಎಂದರೇನು ಎಂದು ಪ್ರಶ್ನೆ ಮಾಡಿದರು

ಶಿಕ್ಷಣ ಸಚಿವರ ಈ ಒಂದು ಹೇಳಿಕೆಯಿಂದಾಗಿ ನಾಡಿನ ಶಿಕ್ಷಕರು ಆತಂಕಗೊಂಡಿದ್ದು ಸಂಘಟನೆಯ ನಾಯಕರು ಏನು ಮಾಡುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.