ಭೀಕರ ಅಪಘಾತ ಸ್ಥಳದಲ್ಲೇ 5 ಪೊಲೀಸರ ಸಾವು – ಕರ್ತವ್ಯವನ್ನು ಮುಗಿಸಿಕೊಂಡು ಮರಳಿ ಹೊರಟಿದ್ದ ಪೊಲೀಸ್ ವಾಹನಕ್ಕೆ ಲಾರಿ ಡಿಕ್ಕಿ ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲು…..

Suddi Sante Desk
ಭೀಕರ ಅಪಘಾತ ಸ್ಥಳದಲ್ಲೇ 5 ಪೊಲೀಸರ ಸಾವು – ಕರ್ತವ್ಯವನ್ನು ಮುಗಿಸಿಕೊಂಡು ಮರಳಿ ಹೊರಟಿದ್ದ ಪೊಲೀಸ್ ವಾಹನಕ್ಕೆ ಲಾರಿ ಡಿಕ್ಕಿ ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲು…..

ರಾಜಸ್ಥಾನ  –

ಭೀಕರ ಅಪಘಾತ ಸ್ಥಳದಲ್ಲೇ 5 ಪೊಲೀಸರ ಸಾವು – ಕರ್ತವ್ಯವನ್ನು ಮುಗಿಸಿಕೊಂಡು ಮರಳಿ ಹೊರಟಿದ್ದ ಪೊಲೀಸ್ ವಾಹನಕ್ಕೆ ಲಾರಿ ಡಿಕ್ಕಿ ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲು

ಪೊಲೀಸ್ ವಾಹನಕ್ಕೆ ಲಾರಿಯೊಂದು ಡಿಕ್ಕಿಯಾಗಿ ಸ್ಥಳದಲ್ಲೇ 5 ಪೊಲೀಸರು ಸಾವಿಗೀಡಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.ರಾಜಸ್ಥಾನದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಪೊಲೀಸರು ಸಾವನ್ನಪ್ಪಿದ್ದು ಇಬ್ಬರು ಪೊಲೀಸ್ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚುನಾವಣಾ ಸಭೆಯ ಭದ್ರತೆಗೆ ನಿಯೋಜನೆ ಗೊಂಡಿದ್ದ ಐವರು ಪೊಲೀಸರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ರಾಜಸ್ಥಾನದ ಚುರು ಪ್ರದೇಶದ ಸುಜನ್‌ಗಢ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರಿದ್ದ ಕಾರು ಮತ್ತು ಟ್ರಕ್​ ನಡುವೆ ಈ ಒಂದು ಅಪಘಾತ ಸಂಭವಿಸಿದೆ.ಇನ್ನೂ ಘಟನೆಯಲ್ಲಿ ಗಾಯ ಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನಾಗೌರ್​ನ ಜೆಎಲ್​ಎನ್​ ಆಸ್ಪತ್ರೆಗೆ ದಾಖಲಿಸಲಾ ಗಿದೆ.

ಬಿಜೆಪಿ ಚುನಾವಣಾ ಸಭೆಯ ಭದ್ರತೆಗಾಗಿ ನಿಯೋಜನೆಗೊಂಡಿದ್ದರು ತಮ್ಮ ಕರ್ತವ್ಯ ಹಿನ್ನಲೆಯಲ್ಲಿ ಹೊರಟಿದ್ದರು.ಈ ವೇಳೆ ಪೊಲೀಸರು ಸಂಚರಿಸುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಟ್ರಕ್​ಗೆ ಡಿಕ್ಕಿಯಾಗಿದೆ.ಅಪಘಾತದಲ್ಲಿ ಗಾಯಗೊಂಡ ಪೊಲೀಸರಿಗೆ ಚಿಕಿತ್ಸೆ ಮುಂದುವ ರೆದಿದೆ.ಗಾಯಗೊಂಡವರಲ್ಲಿ ಕಾನ್‌ಸ್ಟೆಬಲ್ ಮತ್ತು ಹೆಡ್​ ಕಾನ್​ಸ್ಟೆಬಲ್​ ಸೇರಿದ್ದು ಅವರಿಗೆ ನಾಗೌರ್​ನ ಜೆಎಲ್​ಎನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜುಂಜುನುವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಚುನಾವಣಾ ಸಭೆಯಲ್ಲಿನ ಭದ್ರತೆಗೆಂದು ಏಳು ಪೊಲೀಸರು ತೆರಳುತ್ತಿದ್ದಾಗ ಅವರಿದ್ದ ಕಾರು ಟ್ರಕ್​ಗೆ ಡಿಕ್ಕಿ ಹೊಡೆದಿದೆ.ಚುರುವಿನ ಸುಜನ್​ಗಢ್​ ಸದರ್​ ಪೊಲೀಸ್​ ಠಾಣಾ ವ್ಯಾಪ್ತಿ ಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.

ಮೃತರನ್ನು ರಾಜಸ್ಥಾನದ ನಾಗೌರ್​ ಜಿಲ್ಲೆಯ ಖಿನ್ವಸರ್​ ಪೊಲೀಸ್​ ಠಾಣೆಯ ರಾಮಚಂದ್ರ, ಕುಂಭರಾಮ್​, ತನರಾಮ್​, ಲಕ್ಷ್ಮಣ್​ ಸಿಂಗ್​ ಮತ್ತು ಸುರೇಶ್ ಎಂದು ಗುರುತಿಸಲಾಗಿದ್ದು ಈ ಕುರಿತಂತೆ ತನಿಖೆ ಕೂಡಾ ನಡೆಯುತ್ತಿದೆ.

ಸುದ್ದಿ ಸಂತೆ ನ್ಯೂಸ್ ರಾಜಸ್ಥಾನ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.