ಭೀಕರ ಅಪಘಾತ ಮುಖ್ಯಶಿಕ್ಷಕ ಸ್ಥಳದಲ್ಲೇ ಸಾವು – ಶಾಲೆ ಮುಗಿಸಿ ಕೊಂಡು ಹೊರಟಿದ್ದ ವೆಂಕಟೇಶ ಸರ್ ಗೆ ಡಿಕ್ಕಿಯಾದ ಓಮ್ನಿ ಕಾರ್

Suddi Sante Desk

ತೀರ್ಥಹಳ್ಳಿ

 ಓಮ್ಮಿ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿ ಶಾಲಾ ಹೆಡ್‌ ಮಾಸ್ಟರ್‌ ರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕಟ್ಟೆಹಕ್ಲು ಸಮೀಪ ನಡೆದಿದೆ.ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ವೆಂಕಟೇಶ್ (51) ಮೃತವರಾಗಿದ್ದಾರೆ.

ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ವೆಂಕಟೇಶ್ ಸರ್ ಕೊಪ್ಪ ತಾಲೂಕಿನ ಬೊಮ್ಲಾಪುರದ ಹುಕ್ಕಳಿಕೆಯವರಾಗಿದ್ದಾರೆ.ಬೈಕ್ ನಲ್ಲಿ ಬರುತ್ತಿದ್ದಾಗ ನಾಗರ ವಳ್ಳಿ ಸಮೀಪದ ರಸ್ತೆ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಓಮ್ನಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಅಪಘಾತ ದಲ್ಲಿ ಗಂಭೀರವಾಗಿ ಗಾಯಗೊಂಡ ವೆಂಕಟೇಶ್ ರವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶಾಲೆಯ ಕೆಲಸದ ಸಲುವಾಗಿಯೇ ಹೊರಗಡೆ ಹೊರಟಾಗ ಈ ಅವಘಡ ಸಂಭವಿಸಿದೆ.ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.