ಭೀಕರ ಅಪಘಾತ ಶಿಕ್ಷಕ ಸಾವು ಕರ್ತವ್ಯದ ಮೇಲೆ ಪತ್ನಿಯೊಂದಿಗೆ ಹೊರಟಿದ್ದ ಸುರೇಶ್ ಸರ್ ಸ್ಥಳದಲ್ಲೇ ಸಾವು…..ಹೆಡ್ ಕಾನ್ಸ್ಟೇಬಲ್ ಕೂಡಾ ಸಾವು…..

Suddi Sante Desk


ಚಿತ್ರದುರ್ಗ –

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಶಿಕ್ಷಕ ಸೇರಿ ಇಬ್ಬರು ಮೃತರಾದ ಘಟನೆ ಚಿತ್ರದು ರ್ಗ ದಲ್ಲಿ ನಡೆದಿದೆ.ಹೌದು ಎರಡು ಕಾರುಗಳ ನಡುವೆ ಈ ಒಂದು ಅಪಘಾತ ನಡೆದಿದ್ದು ಓಮ್ನಿ ಕಾರಿನಲ್ಲಿದ್ದ ಪೊಲೀಸ್ ಪೇದೆ ಟಿಪ್ಪು ಸುಲ್ತಾನ್ ಮೃತರಾದರೆ ಇನ್ನೂ ಶಿಕ್ಷಕ ಸುರೇಶ್ ಅವರು ಮೃತರಾಗಿದ್ದಾರೆ

ಶಿಕ್ಷಕ ಸುರೇಶ್ ಅವರೊಂದಿಗೆ ಅವರ ಪತ್ನಿ ಪಾರ್ವತಮ್ಮ ಹೊರಟಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆಯ ಗ್ರಾಮದ ಬಳಿ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.

ಓಮ್ನಿ ಕಾರಿನಲ್ಲಿದ್ದ ಬಳ್ಳಾರಿ ಮಹಿಳಾ ಠಾಣೆಯ ಹೆಡ್ ಕಾನ್ಸ್ಟೇಬಲ್ (WPC ) ಟಿಪ್ಪು ಸುಲ್ತಾನ್ (42) ಮತ್ತು ಮತ್ತೊಂದು ಕಾರಿನಲ್ಲಿದ್ದ ಬಳ್ಳಾರಿ ಮೂಲದ ಶಿಕ್ಷಕ ಸುರೇಶ್(58) ಸಾವಿಗೀಡಾಗಿದ್ದಾರೆ.ಸುರೇಶ್ ಪತ್ನಿ ಪಾರ್ವತಮ್ಮಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತರಾದ ಶಿಕ್ಷಕರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ ಎಂದು ಪೊಲೀಸರು ಸುದ್ದಿ ಸಂತೆ ಗೆ ತಿಳಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.