ಕುಂದಾಪುರ –
ಬೈಕ್ ಗೆ ಜಾನುವಾರುವೊಂದು ಅಡ್ಡ ಬಂದ ಪರಿಣಾಮ ವಾಗಿ ಬೈಕ್ ವೊಂದು ಸ್ಕೀಡ್ ಆಗಿ ಬಿದ್ದ ಪರಿಣಾಮವಾಗಿ ಶಿಕ್ಷಕಿಯೊಬ್ಬರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಉಡುಪಿಯ ಕುಂದಾ ಪೂರ ದಲ್ಲಿ ನಡೆದಿದೆ.ಹೌದು ಹೆಮ್ಮಾಡಿ ಸರಕಾರಿ ಹಿ.ಪ್ರಾ. ಶಾಲೆಯ ಶಿಕ್ಷಕಿ ಮುದೂರು ಸೆಳ್ಕೋಡು ನಿವಾಸಿ ಅಂಬಿಕಾ (32) ಅವರು ವಂಡ್ಸೆ ಸಮೀಪ ಗುರುವಾರ ಪತಿ ಶ್ರೀಕಾಂತ್ ಅವರೊಂದಿಗೆ ಶಾಲೆಗೆ ಬೈಕ್ ನಲ್ಲಿ ಹೊರಟಿದ್ದು ವಂಡ್ಸೆ ಸಮೀಪ ದನ ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ಇಬ್ಬರೂ ಕೆಳಕ್ಕೆ ಬಿದ್ದಿದ್ದರು.
ಶ್ರೀಕಾಂತ್ಗೆ ಸಣ್ಣಪುಟ್ಟ ಗಾಯವಾದರೆ ಅಂಬಿಕಾ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಇಂದು ಶಿಕ್ಷಕಿ ಅಂಬಿಕಾ ಸಾವನ್ನಪ್ಪಿದ್ದಾರೆ ಈ ಕುರಿತಂತೆ ಕೊಲ್ಲೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನೂ ನೆಚ್ಚಿನ ಶಿಕ್ಷಕಿ ಮೃತರಾದ ವಿಚಾರ ತಿಳಿದು ಇತ್ತ ಶಾಲೆಯಲ್ಲಿ ನೆಚ್ಚಿನ ಶಿಕ್ಷಕಿಯ ಮೃತದೇಹವನ್ನು ಶಾಲೆಗೆ ತಂದಾಗ ವಿದ್ಯಾರ್ಥಿಗಳು ಊರವರೆಲ್ಲ ಭಾವುಕ ರಾಗಿ ಕಣ್ಣೀರಿಟ್ಟರು.ಅಗಲಿದ ಶಿಕ್ಷಕಿಗೆ ಶಾಲೆಯ ಆವರಣ ದಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು.ಮೃತರ ಗೌರವಾರ್ಥ ಶಾಲೆಗೆ ರಜೆ ನೀಡಲಾಗಿತ್ತು.
ಮೃತ ಶಿಕ್ಷಕಿ ಅಂಬಿಕಾ ಅವರು ಪತಿ, ನಾವುಂದ ಶಾಲೆಯ ಶಿಕ್ಷಕ ಶ್ರೀಕಾಂತ್ ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.ಅಂಬಿಕಾ ಅವರು 2018ರಲ್ಲಿ ಹೆಮ್ಮಾಡಿ ಶಾಲೆಗೆ ಸೇರಿದ್ದು ಅದಕ್ಕೂ ಮೊದಲು ಕಮಲ ಶಿಲೆ ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ದ್ದರು.ಆ ನಾಲ್ಕು ವರ್ಷವೂ ಶಾಲೆಗೆ ಶೇ.100 ಫಲಿತಾಂಶ ಬಂದಿತ್ತು.ಈ ಕಾರಣಕ್ಕಾಗಿ ಅವರಿಗೆ ಅಂದು ಶಾಲಾ ಸಮಿತಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರಶಸ್ತಿ ನೀಡಿತ್ತು.ಈ ವೇಳೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಬೈಂದೂರು ಬಿಇಒ ನಾಗೇಶ್ ನಾಯ್ಕ, ಜಿ.ಪಂ.ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಮಾಜಿ ಸದಸ್ಯೆ ಶೋಭಾ ಜಿ. ಪುತ್ರನ್,ಹೆಮ್ಮಾಡಿ ಗ್ರಾ.ಪಂ.ಅಧ್ಯಕ್ಷ ಸುಧಾಕರ ದೇವಾಡಿಗ,ಸದಸ್ಯರಾದ ಯು. ಸತ್ಯನಾರಾಯಣ ರಾವ್,ರಾಘವೇಂದ್ರ ಪೂಜಾರಿ ಎಚ್., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ, ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ,ಮುಖ್ಯ ಶಿಕ್ಷಕ ದಿವಾಕರ ಎಪಿಎಂಸಿ ಮಾಜಿ ಅಧ್ಯಕ್ಷ ಶರತ ಕುಮಾರ್ ಶೆಟ್ಟಿ ಬಾಳಿಕೆರೆ, ಕಟ್ಬೆಲ್ತೂರು ಗ್ರಾ.ಪಂ. ಅಧ್ಯಕ್ಷ ನಾಗರಾಜ್ ಪುತ್ರನ್, ತಾ| ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರ ಶೇಖರ ಶೆಟ್ಟಿ, ಸಮನ್ವಯಾಧಿಕಾರಿ ಕರುಣಾಕರ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಶೇಖರ ಪೂಜಾರಿ ಅಂತಿಮ ನಮನ ಸಲ್ಲಿಸಿದರು