ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದ ಛತ್ತೀಸಗಢ ಮುಖ್ಯಮಂತ್ರಿಗೆ ಧನ್ಯವಾದಗಳು – ರಾಜ್ಯದ NPS ನೌಕರರ ಪರವಾಗಿ ಅನಂತ ಧನ್ಯವಾದಗಳು…..

Suddi Sante Desk

ಬೆಂಗಳೂರು –

ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೆ ಪಿಂಚಣಿ ಯೋಜನೆಯನ್ನು ದೇಶದ ಒಂದೊಂದು ರಾಜ್ಯಗ ಳಲ್ಲಿ ಜಾರಿಗೆ ತರಲಾಗುತ್ತಿದ್ದು ಮೊನ್ನೆ ಮೊನ್ನೆಯಷ್ಟೇ ಛತ್ತೀಸಗಢದಲ್ಲೂ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದ್ದು ಅಲ್ಲಿನ ಅಧಿಕಾರಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಐತಿಹಾಸಿಕ ತೀರ್ಮಾನವನ್ನು ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ ಬಗೇಲ್.

ಈ ಒಂದು ಐತಿಹಾಸಿಕ ನಿರ್ಧಾರವನ್ನು ತಗೆದುಕೊಂಡು ಜಾರಿಗೆ ಮಾಡಿರುವ ಮುಖ್ಯ ಮಂತ್ರಿಯವರಿಗೆ ರಾಜ್ಯದ ಸಮಸ್ತ NPS ನೌಕರರ ಪರವಾಗಿ ಅನಂತ ಅನಂತ ಧನ್ಯವಾದಗಳನ್ನು ಹೇಳಲಾಗಿದೆ.ಹೌದು ಸಮಸ್ತ ನೌಕರರ ಬಳಗದವರು ಛತ್ತೀಸಗಡ ಮುಖ್ಯಮಂತ್ರಿ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಹೇಳಿ ನಮ್ಮ ರಾಜ್ಯದಲ್ಲೂ ಈ ಕುರಿತಂತೆ ಸಮತಿ ರಚನೆಯಾಗಿದ್ದು ಕೂಡಲೇ ಜಾರಿಗೆ ಬರಲಿ ಎಂದು ಒತ್ತಾಯವನ್ನು ಮುಖ್ಯ ಮಂತ್ರಿ ಅವರಿಗೆ ಆಗ್ರಹಿಸಿದ್ದಾರೆ

ಪರಶುರಾಮ ಗೌಡರ ಜೊತೆ ಮಂಜುನಾಥ ಸರ್ವಿ ಸುದ್ದಿ ಸಂತೆ ಡೆಸ್ಕ್ ಧಾರವಾಡ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.