ರಾಜ್ಯದ ಸರ್ಕಾರಿ ಶಾಲೆ,ನೌಕರರ ಸಂಘದಿಂದ ಸಡಗರ ಸಂಭ್ರದ 73 ನೇ ಗಣರಾಜ್ಯೋತ್ಸವ ಆಚರಣೆ ರಾಜ್ಯದ ಹಲವೆಡೆ ಆಚರಣೆ ಹೇಗಿದೆ ಗೊತ್ತಾ ಕಂಪ್ಲೀಟ್ ಮಾಹಿತಿ…..

Suddi Sante Desk

ಬೆಂಗಳೂರು –

73 ನೇ ಗಣರಾಜ್ಯೋತ್ಸವದ ಆಚರಣೆ ಎಲ್ಲೇಡೆ ಮನೆ ಮಾಡಿದ್ದು ಇನ್ನೂ ಸರ್ಕಾರಿ ಶಾಲೆ ಮತ್ತು ಸರ್ಕಾರಿ ನೌಕರರ ಸಂಘ ಗಳಲ್ಲೂ ಈ ಒಂದು ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಹೌದು ರಾಜ್ಯದ ತುಂಬೆಲ್ಲಾ ಸರ್ಕಾರಿ ಶಾಲೆಗಳಲ್ಲೂ ಮತ್ತು ನೌಕರರ ಸಂಘದಲ್ಲೂ ಇಂದು ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದು ಕಂಡು ಬಂದಿತು.

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಸವಣೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಬಾಲಕರ ಶಾಲೆಯಲ್ಲಿ ಆಚರಣೆ ಮಾಡಿದ್ದು ಕಂಡು ಬಂದಿತು.

ಶಾಲೆಯಲ್ಲಿ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಶಿಕ್ಷಕರು ಮಕ್ಕಳು ಧ್ವಜಾರೋಹ ಣವನ್ನು ಮಾಡಿ ಆಚರಣೆ ಮಾಡಿದ್ರು

ಇತ್ತ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಅದ್ದೂರಿಯಾಗಿ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು SOP ನಿಯಮ ಗಳನ್ನು ಪಾಲಿಸಿ ಆಚರಿಸಲಾಯಿತು.ಈ ಒಂದು ಸಮಯ ದಲ್ಲಿ ಶಾಲೆಯ ಪ್ರಧಾನ ಗುರುಗಳು ಶಿಕ್ಷಕ ಬಂಧುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದು ಗಣರಾಜ್ಯೋತ್ಸವಕ್ಕೆ ಮೆರಗನ್ನು ನೀಡಿದರು.

ಇನ್ನೂ ಇತ್ತ ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗೂರಿನಲ್ಲೂ ಅದ್ದೂರಿಯಾಗಿ 73ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿದ್ದು ಕಂಡು ಬಂದಿತು.ಶಾಲೆಯಲ್ಲಿ ಮುಖ್ಯ ಶಿಕ್ಷಕ ಮತ್ತು ಶಿಕ್ಷಕ ಬಂಧು ಗಳು ಧ್ವಜಾರೋಹಣವನ್ನು ಮಾಡಿದರು ಇದರೊಂದಿಗೆ ನಿಡಸನೊರ ಸರ್ಕಾರಿ ಶಾಲೆಯಲ್ಲೂ ಸಡಗರ ಸಂಭ್ರಮ ದಿಂದ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಸೇರಿದಂತೆ ಶಾಲಾ ಮಕ್ಕಳು ಸಾಮೂಹಿಕವಾಗಿ ಧ್ವಜಾರೋಹಣವನ್ನು ಮಾಡಿದರು.

ಇನ್ನೂ ದಾವಣಗೇರಿಯ ಉತ್ತರ ವಲಯದ ಮಾಗನ ಹಳ್ಳಿಯ ಸರ್ಕಾರಿ ಉರ್ದು ಶಾಲೆಯಲ್ಲೂ 73ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಶಾಲೆಯಲ್ಲಿ ಪ್ರಧಾನ ಗುರುಗಳು ಶಿಕ್ಷಕ ಬಂಧುಗಳು ಸೇರಿದಂತೆ ಎಲ್ಲರೂ ಧ್ವಜಾರೋಹಣವನ್ನು ನೇರವೇರಿಸಿ ದರು.ಇದರೊಂದಿಗೆ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಸಡಗರ ಸಂಭ್ರಮದಿಂದ ನೇರವೆರಿಸಲಾ ಯಿತು

ಇನ್ನೂ ಇತ್ತ ನೂತನ ಜಿಲ್ಲೆಯಾದ ವಿಜಯನಗರ ಜಿಲ್ಲೆಯ ಲ್ಲೂ 73ನೇ ಗಣರಾಜ್ಯೋತ್ಲವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ನೂತನ ಜಿಲ್ಲೆ ಬಳ್ಳಾರಿಯ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಧ್ಯಕ್ಷರು ಸೇರಿದಂತೆ ಹಲವರು ಪಾಲ್ಗೊಂಡು ಆಚರಣೆ ಮಾಡಿದ್ರು.ಜಿಲ್ಲಾಧ್ಯಕ್ಷ ಜಿ ಮಲ್ಲಿಕಾರ್ಜುನಗೌಡ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಪರವಾಗಿ ಧ್ವಜಾರೋಹಣ ಮಾಡಿದರು.ಈ ಒಂದು ಸಮಯದಲ್ಲಿ ಪ್ರಧಾನ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ ಉಪಾಧ್ಯಕ್ಷ ಶ್ರೀನಿವಾಸ ಜೋಶಿ ಡಾ ಮುನಿ ವಾಸುದೇವ ರಡ್ಡಿ ಜೀವನ ನಾಗಭೂಷಣ ಶೆಟ್ಟಿ ಪ್ರಶಾಂತ ಜೋಶಿ ರಾಘವೇಂದ್ರ ಮತ್ತು ಜಯರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು

ಇನ್ನೂ 73 ನೇ ಗಣರಾಜ್ಯದ ದಿನಾಚರಣೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಜಿಹಾಳ ಮತ್ತು ಸರ್ಕಾರಿ ಕಿರಿಯ ಉರ್ದು ಶಾಲೆ ಗಂಜಿಹಾಳ ದಲ್ಲೂ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಸೇರಿದಂತೆ ಹಲವ ರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಶ್ವಿಗೊಳಿಸಿ ದರು.ಶಾಲೆಯ S D M C ಅಧ್ಯಕ್ಷರಾದ ಪರಸಪ್ಪ ಅಚನುರ,ಗ್ಯಾನಪ್ಪ ಹಿರೆಕುರುಬರ ಈರಯ್ಯ ಹಿರೇಮಠ ಮುಖ್ಯಗುರುಗಳಾದ S Y ಭದ್ರಶೇಟ್ಟಿ ಹಾಗು ಎಲ್ಲಾ ಸದಸ್ಯರು ಹಾಗು ಸಹಶಿಕ್ಷಕ ಬಂಧುಗಳು ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಇನ್ನೂ ಇತ್ತ 73 ನೆಯ ಗಣರಾಜ್ಯೋತ್ಸವ ನಿಮಿತ್ತ ಕಲಘಟಗಿ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಆವರಣದಲ್ಲಿ ಕಲಘಟಗಿ ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ಎಂ ಹೊಲ್ತಿ ಕೋಟಿ ಧ್ವಜಾರೋಹಣ ನೆರವೇರಿಸಿದರು ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ನವೀನ ಗೂಳೆರಾ ಗೌರವಾ ಧ್ಯಕ್ಷರಾದ ಐ ವಿ ಜವಳಿ ಕ್ರೀಡಾ ಕಾರ್ಯದರ್ಶಿ ಶಿವಕು ಮಾರ ಕೂರವತ್ತಿ ಜಂಟಿ ಕಾರ್ಯದರ್ಶಿ ಎಂ ಆರ್ ತೋರಗಲ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಇನ್ನೂ ಇತ್ತ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ದಂಡಗುಂಡ ದಲ್ಲೂ ಅರ್ಥಪೂರ್ಣವಾಗಿ 73ನೇ ಗಣರಾ ಜ್ಯೋತ್ಸವವನ್ನು ಆಚರಣೆ ಮಾಡಿದ್ದು ಕಂಡು ಬಂದಿತು. ಶಿಕ್ಷಕ ಬಂಧುಗಳಾದ ಮಾಲತೇಶ ಬಬ್ಬಜ್ಜಿ,ಸಿದ್ದಣ್ಣ ಹಡಪದ ಸಿದ್ರಾಮ,ಸೋಮಪ್ಪ,ಗುರುನಾಥ ರಡ್ಡೆ, ಚಂದ್ರಕಾಂತ, ಶರಣಪ್ಪ,ದುರ್ಗಣ್ಣ, ಸೇರಿದಂತೆ ಹಲವರು ಉಪಸ್ಥಿತರಿ ದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.