7ನೇ ವೇತನ ಆಯೋಗಕ್ಕೆ ಅಧ್ಯಕ್ಷರ ಘೋಷಣೆಯಾಗಿ ವಾರ ಕಳೆಯುತ್ತಾ ಬಂದರು ಇನ್ನೂ ಹೊರಬಾರದ ಆದೇಶ – ರಾಜ್ಯಾಧ್ಯಕ್ಷರೇ ಮುಖ್ಯಮಂತ್ರಿಯವರು ಮರೆತಿದ್ದಾರೆ ಏನೋ ನೋಡಿ ಒಮ್ಮೆ ನೆನಪು ಮಾಡಿ…..

Suddi Sante Desk
7ನೇ ವೇತನ ಆಯೋಗಕ್ಕೆ ಅಧ್ಯಕ್ಷರ ಘೋಷಣೆಯಾಗಿ ವಾರ ಕಳೆಯುತ್ತಾ ಬಂದರು ಇನ್ನೂ ಹೊರಬಾರದ ಆದೇಶ – ರಾಜ್ಯಾಧ್ಯಕ್ಷರೇ ಮುಖ್ಯಮಂತ್ರಿಯವರು ಮರೆತಿದ್ದಾರೆ ಏನೋ ನೋಡಿ ಒಮ್ಮೆ ನೆನಪು ಮಾಡಿ…..

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ನೀಡುವ ವಿಚಾರ ಕುರಿತಂತೆ ಸಮಿತಿಗೆ ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅವರನ್ನು ನೇಮಕಾತಿ ಮಾಡಿ ಆದೇಶವನ್ನು ಮಾಡಲಾಗಿದ್ದು ಇನ್ನೂ ಈ ಒಂದು ಘೋಷಣೆ ಯನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರಿಯಲ್ಲಿ ಮಾಡಿದ್ದು ಇದನ್ನು ಹೇಳಿ ಇವತ್ತಿಗೆ 6 ದಿನಗಳು ಕಳೆದಿದ್ದು

 

 

ಈವರೆಗೆ ಈ ಕುರಿತಂತೆ ರಾಜ್ಯ ಸರ್ಕಾರದಿಂದ ಮಾತ್ರ ಯಾವುದೇ ಆದೇಶ ಮಾತ್ರ ಹೊರ ಬರುತ್ತಿಲ್ಲ ಹೀಗಾಗಿ ವೇತನ ಆಯೋಗಕ್ಕೆ ಅಧ್ಯಕ್ಷ ರನ್ನು ಘೋಷಣೆ ಮಾಡಿದ ನಂತರ ಸಂತಸಗೊಂ ಡಿದ್ದ ನಾಡಿನ ಸಮಸ್ತ ಸರ್ಕಾರಿ ನೌಕರರು ಈಗ ಆತಂಕಗೊಂಡಿದ್ದಾರೆ.

ಸಮಿತಿಗೆ ಅಧ್ಯಕ್ಷರನ್ನು ಘೋಷಣೆ ಮಾಡಿದ ಮುಖ್ಯಮಂತ್ರಿ ಅವರು ಇದನ್ನು ಮರೆತಿದ್ದಾರೆನಾ ಅಥವಾ ಅವಸರದಲ್ಲಿ ಇದನ್ನು ಘೋಷಣೆ ಮಾಡಿದ್ರಾ ಏನು ಎಂಬ ಮಾತುಗಳು ಸಧ್ಯ ರಾಜ್ಯದ ತುಂಬೆಲ್ಲಾ ಸರ್ಕಾರಿ ನೌಕರರಿಂದ ಕೇಳಿ ಬರುತ್ತಿದ್ದು ಹೀಗಾಗಿ ದೊಡ್ಡದೊಂದು ಆತಂಕ ಉಂಟಾಗಿದ್ದು

ಹೀಗಾಗಿ ಇತ್ತ ಅಧ್ಯಕ್ಷರು ಆದೇಶ ಬರುವ ಮುನ್ನವೇ ಒಂದಿಷ್ಟು ಕಾರ್ಯ ಚಟುವಟಿಕೆಗ ಳನ್ನು ಆರಂಭ ಮಾಡಿದ್ದು ಇತ್ತ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ಈ ಕುರಿತಂತೆ ಮುಖ್ಯಮಂತ್ರಿ ಅವರನ್ನು ಇಲ್ಲವೇ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರನ್ನು ಸಂಪರ್ಕ ಮಾಡಿ ಆದೇಶ ಕುರಿತಂತೆ ಮಾತನಾಡಿ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವಂತೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಸುದ್ದಿ ಸಂತೆ ಒತ್ತಾಯವನ್ನು ಮಾಡುತ್ತಿದೆ.

ಶ್ರೀಗೌರಿ ಸುದ್ದಿ ಸಂತೆ ನ್ಯೂಸ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.